ಶ್ರೀರಾಮನೇ ಸೀತೆಯನ್ನು ಸಂಶಯದಿಂದ ತೊರೆದಿದ್ದ

Published : Aug 11, 2018, 11:53 AM ISTUpdated : Sep 09, 2018, 09:23 PM IST
ಶ್ರೀರಾಮನೇ ಸೀತೆಯನ್ನು ಸಂಶಯದಿಂದ ತೊರೆದಿದ್ದ

ಸಾರಾಂಶ

ಶ್ರೀ ರಾಮನೆ ಒಮ್ಮೆ ಸಂಶಯದಿಂದ ಸೀತೆಯನ್ನು ತೊರೆದಿದ್ದ ಎಂದು ಕಾಂಗ್ರೆಸ್ ಮುಖಂಡರು ಇದೀಗ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. 

ನವದೆಹಲಿ: ತ್ವರಿತ ತ್ರಿವಳಿ ತಲಾಖ್‌ ಮಸೂದೆ ಕುರಿತು ವ್ಯಾಪಕ ಚರ್ಚೆ ನಡುವೆ, ಮಹಾರಾಷ್ಟ್ರದ ಕಾಂಗ್ರೆಸ್‌ ಸಂಸದ ಹುಸೇನ್‌ ದಳವಾಯಿ ಅವರು ಶ್ರೀರಾಮನ ಬಗ್ಗೆ ನೀಡಿರುವ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. ‘ಶ್ರೀರಾಮಚಂದ್ರನೇ ಒಂದು ಬಾರಿ ಪತ್ನಿಯನ್ನು ಸಂಶಯಿಸಿ ಸೀತಾಜೀ ತೊರೆದಿದ್ದ’ ಎಂದು ಹುಸೇನ್‌ ಹೇಳಿರುವುದು ವಿವಾದವಾಗಿದೆ.

‘ಮಹಿಳೆಯರಿಗೆ ಎಲ್ಲ ಸಮುದಾಯಗಳಲ್ಲೂ ತಾರತಮ್ಯ ಎಸಗಲಾಗುತ್ತಿದೆ. ಮುಸ್ಲಿಮರಲ್ಲಿ ಮಾತ್ರವಲ್ಲ ಹಿಂದೂ, ಕ್ರೈಸ್ತ, ಸಿಖ್ಖರಲ್ಲೂ ಅದು ನಡೆಯುತ್ತದೆ. ಪ್ರತಿಯೊಂದು ಸಮಾಜದಲ್ಲೂ ಪುರುಷರದ್ದೇ ಪ್ರಾಬಲ್ಯವಿದೆ. ಶ್ರೀರಾಮಚಂದ್ರನೇ ಒಂದು ಬಾರಿ ಸೀತಾಜೀಯನ್ನು ಸಂಶಯಿಸಿ ತೊರೆದಿದ್ದ. ಹೀಗಾಗಿ ನಾವು ಸಮಗ್ರ ಬದಲಾವಣೆ ತರಬೇಕಾಗಿದೆ’ ಎಂದು ಅವರು ಹೇಳಿದ್ದರು.

ಆದರೆ, ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚರಗೊಂಡ ಹುಸೇನ್‌, ‘ನಾನು ಶ್ರೀರಾಮನನ್ನು ಗೌರವಿಸುತ್ತೇನೆ’ ಎಂದಿದ್ದಾರೆ. ‘ಹೇಳಿಕೆಯಿಂದ ನಿರ್ದಿಷ್ಟಸಮುದಾಯದ ಭಾವನೆಗಳಿಗೆ ಧಕ್ಕೆಯಾದರೆ, ಕ್ಷಮೆ ಯಾಚಿಸುತ್ತೇನೆ’ ಎಂದೂ ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ