ಆಕ್ರೋಶದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಎನ್ ಎಸ್ ಯು ಐ ಕಾರ್ಯಕರ್ತರು

Published : Nov 28, 2016, 08:35 AM ISTUpdated : Apr 11, 2018, 12:58 PM IST
ಆಕ್ರೋಶದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಎನ್ ಎಸ್ ಯು ಐ ಕಾರ್ಯಕರ್ತರು

ಸಾರಾಂಶ

ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ಧಾರವಾಡ (ನ.28) ಧಾರವಾಡದಲ್ಲಿ ಆಕ್ರೋಶ್ ದಿವಸ್ ಆಚರಣೆ ವೇಳೆ ಎನ್ ಎಸ್ ಯು ಐ ಕಾರ್ಯಕರ್ತರು ಶಾಲಾ ಕಾಲೇಜುಗಳನ್ನು ನಡೆಸಬಾರದೆಂದು ಆಗ್ರಹಿಸಿ ಧಾರವಾಡದ ಕರ್ನಾಟಕ ಕಾಲೇಜಿನ ಪಾಠದ ಕೊಠಡಿಗಳಿಗೆ ನುಗ್ಗಿ ಉಪನ್ಯಾಸಕನನ್ನು ಥಳಿಸಿ ಕಾಲೇಜನ್ನು ಬಂದ್​ ಮಾಡಿಸಿದ್ದಾರೆ.  

ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ದೌರ್ಜನ್ಯಕ್ಕೊಳಗಾದ ಉಪನ್ಯಾಸಕ ಸದಾಶಿವ ಅವರ ಮುಖದ ಮೇಲೆಲ್ಲಾ ಗಾಯಗಳಾಗಿದ್ದು, ಇದೀಗ ಕಾಲೇಜಿಗೆ ಧಾರವಾಡ ಉಪ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಟ ಸುದೀಪ್‌ಗೆ ಮತ್ತೊಂದು ಪೋಸ್ಟ್ ಮೂಲಕ ಉತ್ತರಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮೀ..!
ಚಿತ್ರರಂಗಕ್ಕೇ ಗುಡ್​ಬೈ ಹೇಳಿ, ದಾಖಲೆಯನ್ನೂ ಸೃಷ್ಟಿಸಿದ ಬೆನ್ನಲ್ಲೇ ಕುಸಿದು ಬಿದ್ದ ನಟ ವಿಜಯ್​! ಏನಿದು ಘಟನೆ?