ಆಕ್ರೋಶದ ಹೆಸರಿನಲ್ಲಿ ಗೂಂಡಾಗಿರಿ ನಡೆಸಿದ ಎನ್ ಎಸ್ ಯು ಐ ಕಾರ್ಯಕರ್ತರು

By Suvarna Web DeskFirst Published Nov 28, 2016, 8:35 AM IST
Highlights

ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ಧಾರವಾಡ (ನ.28) ಧಾರವಾಡದಲ್ಲಿ ಆಕ್ರೋಶ್ ದಿವಸ್ ಆಚರಣೆ ವೇಳೆ ಎನ್ ಎಸ್ ಯು ಐ ಕಾರ್ಯಕರ್ತರು ಶಾಲಾ ಕಾಲೇಜುಗಳನ್ನು ನಡೆಸಬಾರದೆಂದು ಆಗ್ರಹಿಸಿ ಧಾರವಾಡದ ಕರ್ನಾಟಕ ಕಾಲೇಜಿನ ಪಾಠದ ಕೊಠಡಿಗಳಿಗೆ ನುಗ್ಗಿ ಉಪನ್ಯಾಸಕನನ್ನು ಥಳಿಸಿ ಕಾಲೇಜನ್ನು ಬಂದ್​ ಮಾಡಿಸಿದ್ದಾರೆ.  

ಕರ್ನಾಟಕ ಪಿಯು ಕಾಲೇಜು ಉಪನ್ಯಾಸಕ ಸದಾಶಿವ ಅವರನ್ನು ಮುಖಕ್ಕೆ ಥಳಿಸಿ, ಕಾಲಿನಿಂದ ಜಾಡಿಸಿ ಹೊಡೆಯುವ ಮೂಲಕ ಅವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ, ಆಕ್ರೋಶ್ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಕಾಲೇಜು ಕ್ಯಾಂಪಸ್​ ಪ್ರವೇಶಿಸಿದ ಪ್ರತಿಭಟನಾಕಾರರು ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಗೆ ಕಳುಹಿಸಿದರು.

ದೌರ್ಜನ್ಯಕ್ಕೊಳಗಾದ ಉಪನ್ಯಾಸಕ ಸದಾಶಿವ ಅವರ ಮುಖದ ಮೇಲೆಲ್ಲಾ ಗಾಯಗಳಾಗಿದ್ದು, ಇದೀಗ ಕಾಲೇಜಿಗೆ ಧಾರವಾಡ ಉಪ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

click me!