
ಮುಂಬೈ: ‘ಪೆಟ್ರೋಲ್ ದರ ಏರಿಕೆಯಿಂದ ಮಂತ್ರಿ ಗಳಿಗೆ ಚಿಂತೆಯಿಲ್ಲ. ಏಕೆಂದರೆ ಮಂತ್ರಿಗಳ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ.
ತೊಂದರೆ ಏನಿದ್ದರೂ ಜನಸಾಮಾನ್ಯರಿಗೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಭಾನುವಾರ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.
‘ನಾನು ಯಾರ ಮನ ನೋಯಿಸಲೂ ಈ ಹೇಳಿಕೆ ನೀಡಿರಲಿಲ್ಲ. ನನಗೆ ಜನಸಾಮಾನ್ಯರ ಬವಣೆ ಅರ್ಥವಾಗುತ್ತದೆ’ ಎಂದಿದ್ದಾರೆ.
ಜೈಪುರದಲ್ಲಿ ಶನಿವಾರ ಮಾತನಾಡಿದ್ದ ಅವರು, ‘ನಾನು ಕೇಂದ್ರ ಮಂತ್ರಿ. ನನ್ನ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ. ಹೀಗಾಗಿ ನನಗೆ ದರ ಏರಿಕೆಯ ಬಿಸಿ ತಟ್ಟಿಲ್ಲ ಎಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.