ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

Published : Jun 22, 2018, 02:35 PM IST
ಇದೊಳ್ಳೆ ರಾಮಾಯಾಣ: ಕುಡಿತ ಬೇಡ ಅನ್ನೋರು ಬೇಗನೆ ಸಾಯ್ತಾರಂತೆ..!

ಸಾರಾಂಶ

ಆಲ್ಕೋಹಾಲ್ ಸೇವನೆ ಮಾಡದಿದ್ದರೆ ಸಾವು ಬೇಗ ಬರುತ್ತೆ ನ್ಯೂಜಿಲ್ಯಾಂಡ್ ಕ್ವೀನ್ಸ್ ವಿವಿ ಸಂಶೋಧಕರ ಅಂಬೋಣ ಆಲ್ಕೋಹಾಲ್ ಸೇವನೆ ಮಾಡುವವರ ಆಯುಷ್ಯ ಧೀರ್ಘವಂತೆ ಅನಿಯಂತ್ರಿತ ಕುಡಿತಕ್ಕೆ ಎಚ್ಚರಿಕೆಯನ್ನೂ ನೀಡಿದ ಸಂಶೋಧನೆ

ಬೆಂಗಳೂರು(ಜೂ.22): ಇದು ಕುಡುಕರಿಗೆ ಒಳ್ಳೆ ಸುದ್ದಿಯೋ ಅಥವಾ ಕುಡಿತವನ್ನು ದ್ವೇಷಿಸುವವರಿಗೆ ಕೆಟ್ಟ ಸುದ್ದಿಯೋ ಗೊತ್ತಿಲ್ಲ. ಆದರೆ ಇಬ್ಬರೂ ಈ ಸುದ್ದಿಯನ್ನು ಓದಲೇಬೇಕಾದ ಜರೂರತ್ತು ಇದೆ. ನ್ಯೂಜಿಲ್ಯಾಂಡ್ ನ ಕ್ವೀನ್ಸ್ ಯುನಿವರ್ಸಿಟಿ ಸಂಶೋಧಕರು ಪ್ರಕಟಿಸಿದ ವರದಿಯೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ಹೌದು, ನ್ಯೂಜಿಲ್ಯಾಂಡ್ ನ ಕ್ವೀನ್ಸ್ ಯುನಿವರ್ಸಿಟಿ ಸಂಶೋಧಕ ಪ್ರಕಾರ ಆಲ್ಕೋಹಾಲ್ ಸೇವನೆ ಮಾಡದವರಿಗೆ ಇದನ್ನು ಸೇವನೆ ಮಾಡುವವರಿಗಿಂತ ಬೇಗ ಸಾವು ಸಂಬವಿಸುತ್ತದಂತೆ. ವಾರಕ್ಕೆ ಎರಡು ಬಾಟಲ್ ಬೀರ್ ಅಥವಾ ಒಂದು ಗ್ಲಾಸ್ ವೈನ್ ಕುಡಿಯುವ ಹವ್ಯಾಸವುಳ್ಳವರು ಆರೋಗ್ಯವಂತರಾಗಿರುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಅಮೆರಿಕದಲ್ಲಿ ನಿಧನರಾದ 55 ವರ್ಷಕ್ಕೆ ಮೇಲ್ಪಟ್ಟ ಸುಮಾರು ಒಂದು ಲಕ್ಷ ಜನರ ಕುರಿತು ಸಂಶೋಧನೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕ್ವೀನ್ಸ್ ಯುನಿವರ್ಸಿಟಿಯ ಸಂಶೋಧಕ ಡಾ. ಆಂಡ್ರೂ ಕುಂಜಮನ್, ಆಲ್ಕೋಹಾಲ್ ಸೇವನೆ ಮಾಡದವರಿಗೆ ಇದನ್ನು ಸೇವನೆ ಮಾಡುವವರಿಗಿಂತ ಬೇಗನೆ ಸಾವು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಆಲ್ಕೋಹಾಲ್ ಸೇವನೆ ಮಾಡದವರಲ್ಲಿ ಕ್ಯಾನ್ಸರ್ ರೋಗ ಹೆಚ್ಚು ಕಂಡುಬಂದಿದೆ ಎಂದು ಕುಂಜಮನ್ ತಿಳಿಸಿದ್ದಾರೆ.

ಆದರೆ ಈ ಕುರಿತು ಮತ್ತಷ್ಟು ಸಂಶೋಧನೆ ನಡೆಸುವ ಅವಶ್ಯಕತೆ ಇದೆ ಎಂದೂ ಡಾ. ಕುಂಜಮನ್ ತಿಳಿಸಿದ್ದಾರೆ. ಈ ಸಂಶೋಧನೆ ಅನಿಯಂತ್ರಿತ ಆಲ್ಕೋಹಾಲ್ ಸೇವನೆಯನ್ನು ಖಂಡಿತ ಬೆಂಬಲಿಸುವುದಿಲ್ಲ ಎಂದಿರುವ ಅವರು, ನಿಯಂತ್ರಿತ ಆಲ್ಕೋಹಾಲ್ ಸೇವನೆಯಿಂದಾಗಬಹುದಾದ ಸಕಾರಾತ್ಮಕ ಅಂಶಗಳನ್ನು ಮಾತ್ರ ಸಂಶೋಧನೆಯಲ್ಲಿ ಗಣನೆಗೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ- ಮದಿರೆ ಎಂಬ ಮತ್ತಿನ ಕುದುರೆ ಏರಿ: ಜಾನಿ ವಾಕರ್ ಯಶೋಗಾಥೆ..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆಶಿ ಸಿಎಂ ಆದ್ರೆ ಅವರ ಸಂಪುಟದಲ್ಲಿ ನಾನು ಸಚಿವ ಆಗೋಲ್ಲ: ಕೆಎನ್ ರಾಜಣ್ಣ ದೊಡ್ಡ ನಿರ್ಧಾರ!
ಅನುದಾನ ಬೇಕಾದ್ರೆ ನಾಟಿ ಕೋಳಿ ಅಡುಗೆ ಮಾಡಬೇಕಾ? ರಾಜ್ಯ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆ