
ವಡೋದರಾ[ಮಾ.05]: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಸಾಕ್ಷ್ಯ ಚಿತ್ರವೊಂದರಲ್ಲಿ 2002ರ ಗೋಧ್ರಾ ರೈಲು ದುರಂತವನ್ನು ಮರುಸೃಷ್ಟಿಸಲು ಬಳಕೆ ಆಗದ ರೈಲು ಬೋಗಿಯೊಂದಕ್ಕೆ ಬೆಂಕಿ ಹಚ್ಚಲಾಗಿದೆ ಎಂಬ ಮಾಧ್ಯಮ ವರದಿಯನ್ನು ರೈಲ್ವೆ ಅಧಿಕಾರಿಗಳು ಸೋಮವಾರ ನಿರಾಕರಿಸಿದ್ದಾರೆ.
ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್.6 ಬೋಗಿಗೆ 2002ರ ಫೆ.27ರಂದು ಬೆಂಕಿ ಹಚ್ಚಿದ ಘಟನೆಯನ್ನು ಪ್ರತಾಪ್ನಗರ್ ಮತ್ತು ವಿಶ್ವಾಮಿತ್ರಿ ನಿಲ್ದಾಣಗಳ ಮಧ್ಯೆ ಚಿತ್ರೀಕರಿಸಲು ನಾಲ್ಕು ದಿನಗಳ ಅನುಮತಿ ನೀಡಲಾಗಿತ್ತು. ‘ಅಣಕು ಪ್ರದರ್ಶನ ಬೋಗಿ’ಯನ್ನು ಚಿತ್ರೀಕರಣದ ಬಳಿಕ ಅದೇ ಸ್ಥಿತಿಯಲ್ಲಿ ಮರಳಿಸಬೇಕು ಎಂದು ಸಾಕ್ಷ್ಯ ಚಿತ್ರ ತಂಡಕ್ಕೆ ಸೂಚನೆ ನೀಡಿದ ಹೊರತಾಗಿಯೂ ಬೋಗಿಗೆ ಬೆಂಕಿ ಹಚ್ಚಲಾಗಿದೆ ಮಾಧ್ಯಮದಲ್ಲಿ ವರದಿಯಾಗಿತ್ತು. ಆದರೆ, ಚಿತ್ರೀಕರಣ ಮೇಲ್ವಿಚಾರಣೆ ನಡೆಸಿದ್ದ ಅಧಿಕಾರಿಗಳು ಬೋಗಿಗೆ ಬೆಂಕಿ ಹಚ್ಚಿರುವುದನ್ನು ನಿರಾಕರಿಸಿದ್ದಾರೆ.
ರೈಲಿಗೆ ಹೊರಗಿನಿಂದ ಬೆಂಕಿ ಹಾಕಿದ ದೃಶ್ಯವನ್ನು ಚಿತ್ರೀಕರಿಸಲು ಬೋಗಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ದೃಶ್ಯ ಕೇವಲ 20 ಸೆಕೆಂಡ್ಗಳದ್ದಾಗಿದ್ದು, ಬೋಗಿಗೆ ಬೆಂಕಿ ಹಚ್ಚಲಾಗಿಲ್ಲ. 2002ರ ಗೋಧ್ರಾ ಘಟನೆಯನ್ನು ಮುಂಬೈನಲ್ಲಿ ನಿರ್ಮಿಸಲಾದ ಸೆಟ್ನಲ್ಲಿ ಚಿತ್ರೀಕರಿಸಲಾಗುವುದು ಎಂದು ಚಿತ್ರೀಕರಣದ ಮೇಲ್ವಿಚಾರಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.