ದಾವೂದ್, ಹಫೀಜ್'ಗೆ ಮೋದಿ ಸರ್ಕಾರ ಮೋಕ್ಷ ತೋರಿಸಲಿದೆ

Published : Oct 06, 2016, 11:40 AM ISTUpdated : Apr 11, 2018, 12:59 PM IST
ದಾವೂದ್, ಹಫೀಜ್'ಗೆ ಮೋದಿ ಸರ್ಕಾರ ಮೋಕ್ಷ ತೋರಿಸಲಿದೆ

ಸಾರಾಂಶ

ನವದೆಹಲಿ(ಅ.06): ಇತ್ತೀಚೆಗಷ್ಟೇ ಉಗ್ರರ ಮೇಲೆ ಸರ್ಜಿಕಲ್ ದಾಳಿಯನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಸೇನೆ, ಭಯೋತ್ಪಾದಕರ ಮಾಸ್ಟರ್'ಮೈಂಡ್'ಗಳಾದ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂ ಮೇಲೆ ಕಣ್ಣಿಟ್ಟಿದೆ ಎಂದು ಯೋಗ ಗುರು ಬಾಬಾ ರಾಮ್'ದೇವ್ ಹೇಳಿದ್ದಾರೆ.

ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ರಾಮ್'ದೇವ್, ಭಾರತ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಸರಿಯಾದ ತಿರುಗೇಟು ನೀಡಿದೆ ಎಂದು ಹೇಳಿದ್ದಾರೆ.

ಭಾರತದ ಮುಂದಿನ ಗುರಿಯೇನಿದ್ದರೂ ಉಗ್ರ ಸಂಘಟನೆಯ ಮುಖ್ಯಸ್ಥರಾದ ಹಫೀಜ್ ಸಯೀದ್ ಮತ್ತು ದಾವೂದ್. ಇವರಿಬ್ಬರನ್ನು ಜೀವಂತವಾಗಿ ಹಿಡಿಯುವ ಅವಶ್ಯಕತೆಯಿಲ್ಲ. ಇವರಿಗೆ ಮೋಕ್ಷ(ಮುಕ್ತಿ) ನೀಡಿದಾಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಹೆಸರು ಚಿರಕಾಲ ಉಳಿಯಲಿದೆ ಎಂದು ರಾಮ್'ದೇವ್ ಹೇಳಿದ್ದಾರೆ.

ಸರ್ಜಿಕಲ್ ದಾಳಿಯ ವಿಡಿಯೋವನ್ನು ಬಿಡುಗಡೆಗೊಳಿಸುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಯೋಗ ಗುರು ಅಭಿಪ್ರಾಯಪಟ್ಟಿದ್ದಾರೆ.   

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೇಪಾಳದ ಭೋಟೆ ಕೋಶಿ ನದಿ ಜಲಪ್ರಳಯಕ್ಕೆ 157 ಬಲಿ, 133 ಭಾರತೀಯರು ನಾಪತ್ತೆಯಾದವರ ಸಂಖ್ಯೆ 750ಕ್ಕೆ ಏರಿಕೆ!
Finance: ಸೆಪ್ಟೆಂಬರ್ 1 ರಿಂದ ಹೊಸ ನಿಯಮಗಳು: ಬದಲಾಗಲಿದೆ ನಿಮ್ಮ ಹಣಕಾಸು ಜಗತ್ತು!