ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಮಮತಾ ನಿಷೇಧ!

Published : Jun 08, 2019, 09:07 AM IST
ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಮಮತಾ ನಿಷೇಧ!

ಸಾರಾಂಶ

ಬಂಗಾಳದಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಮಮತಾ ನಿಷೇಧ!|  ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ನಿಷೇಧ

ಕೋಲ್ಕತಾ[ಜೂ.08]: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ವಿಜಯೋತ್ಸವ ರ‍್ಯಾಲಿಗಳಿಗೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ.

ಎರಡು ದಿನದ ಹಿಂದಷ್ಟೇ ಉತ್ತರ 24 ಪರಗಣದ ನಿಮ್ತಾದಲ್ಲಿನ ತೃಣಮೂಲ ಪಕ್ಷದ ವಾರ್ಡ್‌ ಅಧ್ಯಕ್ಷ ನಿರ್ಮಲ್‌ ಕುಂದು ಅವರ ಹತ್ಯೆ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಮಮತಾ ಬ್ಯಾನರ್ಜಿ, ಹತ್ಯೆ ಕುರಿತು ಸಿಐಡಿ ತನಿಖೆಗೆ ಆದೇಶಿಸಿದರು. ಜೊತೆಗೆ ವಿಜಯೋತ್ಸವ ರಾರ‍ಯಲಿಗೆ ನಿಷೇಧ ಹೇರಿದ್ದಾಗಿ ಪ್ರಕಟಿಸಿದರು.

ಇದೇ ವೇಳೆ ಬಿಜೆಪಿಯನ್ನು ಹೆಸರಿಸದೇ ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿರುವ ಮಮತಾ, ಕೊಲೆ ನಮ್ಮ ಸಂಸ್ಕೃತಿಯಲ್ಲ, ಇದೀಗ 18 ಸ್ಥಾನ ಗೆದ್ದವರಿಂದ ಆಗಲೇ ಅಶಾಂತಿ ಸೃಷ್ಠಿ ಆರಂಭವಾಗಿದೆ ಎಂದು ದೂರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!