ರೈಲು ಪ್ರಯಾಣಿಕರಿಗೆ ಐಆರ್ ಸಿಟಿಸಿ ಶಾಕ್

Published : Aug 12, 2018, 11:52 AM ISTUpdated : Sep 09, 2018, 08:55 PM IST
ರೈಲು ಪ್ರಯಾಣಿಕರಿಗೆ ಐಆರ್ ಸಿಟಿಸಿ ಶಾಕ್

ಸಾರಾಂಶ

ರೈಲ್ವೆ ಪ್ರಯಾಣಿಕರಿಗೆ ಇದೀಗ ಐಆರ್ ಸಿಟಿಸಿ ಶಾಕಿಂಗ್ ಸುದ್ದಿಯೊಂದನ್ನು ನೀಡುತ್ತಿದೆ. ಪ್ರಯಾಣಿಕರಿಗೆ ನೀಡುತ್ತಿದ್ದ ಉಚಿಯ ವಿಮಾ ಸೌಲಭ್ಯವನ್ನು ರದ್ದು ಮಾಡಲು ನಿರ್ಧರಿಸಿದೆ.

ನವದೆಹಲಿ: ರೈಲು ಪ್ರಯಾಣದ ವೇಳೆಯ ಉಚಿತ ವಿಮಾ ಸೌಲಭ್ಯವನ್ನು ತೆಗೆದು ಹಾಕಲು ಭಾರತೀಯ ರೈಲ್ವೆಯ ಅಂಗ ಸಂಸ್ಥೆಯಾದ ಐಆರ್‌ಸಿಟಿಸಿ ನಿರ್ಧರಿಸಿದೆ. ಸೆಪ್ಟೆಂಬರ್‌ 1ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಈವರೆಗೆ ಟಿಕೆಟ್‌ ಬುಕ್‌ ಮಾಡಿದಾಗ ತನ್ನಿಂತಾನೇ ವಿಮಾ ಸೌಲಭ್ಯವೂ ಪ್ರಯಾಣಿಕರಿಗೆ ದೊರಕುತ್ತಿತ್ತು. ಆದರೆ ಇನ್ನು ಟಿಕೆಟ್‌ ಕಾಯ್ದಿರಿಸುವ ವೇಳೆ ವಿಮೆ ಬೇಕೇ? ಬೇಡವೇ ಎಂಬ ಆಯ್ಕೆಯನ್ನು ಪ್ರಯಾಣಿಕರಿಗೆ ಐಆರ್‌ಸಿಟಿಸಿ ಬುಕ್ಕಿಂಗ್‌ ವೆಬ್‌ಸೈಟ್‌ ನೀಡುತ್ತದೆ. ಆಗ ವಿಮೆ ಬೇಕು ಎಂದವರು ‘ಆಪ್ಟ್‌-ಇನ್‌’ ಎಂದೂ, ಬೇಡ ಎನ್ನುವವರು ‘ಆಪ್ಟ್‌-ಔಟ್‌’ ಎಂದೂ ಆಯ್ಕೆ ಮಾಡಿಕೊಳ್ಳಬೇಕು. ಆದರೆ ವಿಮೆ ಬೇಕು ಎನ್ನುವವರು ಎಷ್ಟುಹಣ ಕಟ್ಟಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಈಗ ರೈಲ್ವೆ ಅಪಘಾತದ ಸಂದರ್ಭದಲ್ಲಿ ಮಡಿದರೆ 10 ಲಕ್ಷ ರು., ಅಂಗವಿಕಲನಾದರೆ 7.5 ಲಕ್ಷ ರು., ಗಾಯಗೊಂಡರೆ 2 ಲಕ್ಷ ರು., ಹಾಗೂ ಶವ ಸಾಗಿಸಲು 10 ಸಾವಿರ ರು. ವಿಮಾ ಹಣ ಲಭಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ
ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ