ಚಾಚಾ ನೆಹರೂ ಮಕ್ಕಳ ಪ್ರಿಯರಲ್ಲ ಲೂಟಿಕೋರ ಪ್ರಧಾನ ಮಂತ್ರಿ!

Published : Mar 09, 2018, 10:28 AM ISTUpdated : Apr 11, 2018, 01:01 PM IST
ಚಾಚಾ ನೆಹರೂ ಮಕ್ಕಳ ಪ್ರಿಯರಲ್ಲ ಲೂಟಿಕೋರ ಪ್ರಧಾನ ಮಂತ್ರಿ!

ಸಾರಾಂಶ

ಚಾಚಾ ನೆಹರೂ ಅವರು ದೇಶದ ಮೊದಲ ಪ್ರಧಾನಿ. ಅದಕ್ಕೂ ಹೆಚ್ಚಾಗಿ ಮಕ್ಕಳು ಎಂದರೆ ಅವರಿಗೆ ಭಾರೀ ಅಚ್ಚುಮೆಚ್ಚು. ಇದೇ ಕಾರಣಕ್ಕಾಗಿ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದ ನ.14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್‌ ಪ್ರಾಥಮಿಕ ಮಕ್ಕಳಿಗೆ ಚಾಚಾ ನೆಹರೂ ಬಗ್ಗೆ ವಿವರಣೆ ನೀಡಿ ಎಂದರೆ, ಅವರು ಖಂಡಿತವಾಗಿಯೂ ಚಾಚಾ ನೆಹರೂ ಖದೀಮ. ಅವರೊಬ್ಬ ಲೂಟಿಕೋರ ಎಂದು ಹೇಳುತ್ತಾರೆ.

ರಾಂಚಿ: ಚಾಚಾ ನೆಹರೂ ಅವರು ದೇಶದ ಮೊದಲ ಪ್ರಧಾನಿ. ಅದಕ್ಕೂ ಹೆಚ್ಚಾಗಿ ಮಕ್ಕಳು ಎಂದರೆ ಅವರಿಗೆ ಭಾರೀ ಅಚ್ಚುಮೆಚ್ಚು. ಇದೇ ಕಾರಣಕ್ಕಾಗಿ ಅವರ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷದ ನ.14ರಂದು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಆದರೆ, ಜಾರ್ಖಂಡ್‌ ಪ್ರಾಥಮಿಕ ಮಕ್ಕಳಿಗೆ ಚಾಚಾ ನೆಹರೂ ಬಗ್ಗೆ ವಿವರಣೆ ನೀಡಿ ಎಂದರೆ, ಅವರು ಖಂಡಿತವಾಗಿಯೂ ಚಾಚಾ ನೆಹರೂ ಖದೀಮ. ಅವರೊಬ್ಬ ಲೂಟಿಕೋರ ಎಂದು ಹೇಳುತ್ತಾರೆ.

ಹೌದು, ಇಲ್ಲಿನ ಕುಟಿ ಎಂಬ ಗ್ರಾಮದ ಶಾಲೆಯೊಂದರಲ್ಲಿ ಅಧ್ಯಯನ ಮಾಡುತ್ತಿರುವ ಮಕ್ಕಳಿಗೆ ಪಂಡಿತ ಜವಾಹರಲಾಲ್‌ ನೆಹರೂ ಅವರನ್ನು ಪ್ರಧಾನಿ ಚೋರಾ ಎಂದು ಬೋಧಿಸಲಾಗುತ್ತಿದೆ. ಇನ್ನೂ ಆತಂಕಕಾರಿ ಅಂಶವೆಂದರೆ, ಬಿ ಎಂದರೆ ಬ್ರಾಹ್ಮಣರು ಬುರ್ಬಕ್‌(ದಡ್ಡರು), ಸಿ ಎಂದರೆ ಕಳ್ಳ, ‘ನೆಹರೂ ಕಳ್ಳ ಪ್ರಧಾನಿ’ ಎಂದು ಶಿಕ್ಷಕರು ಹೇಳಿಕೊಡುತ್ತಿದ್ದಾರೆ. ಈ ಬಗ್ಗೆ ಗೊತ್ತಿಲ್ಲದ ಅಮಾಯಕ ವಿದ್ಯಾರ್ಥಿಗಳು, ಶಿಕ್ಷಕರು ಹೇಳಿಕೊಟ್ಟಿದ್ದನ್ನು ಹಾಗೆಯೇ ಪುನರಾವರ್ತನೆ ಮಾಡುತ್ತಾರೆ.

ಈ ಬಗ್ಗೆ ಇಲ್ಲಿನ ಶಿಕ್ಷಣ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ನೀಡುವ ಪಾಠಗಳನ್ನು ಕಲಿಸಿಕೊಡುತ್ತಿರುವ ಮಾಹಿತಿ ತಮಗೆ ಲಭ್ಯವಿಲ್ಲ. ಈ ಬಗ್ಗೆ ತನಿಖೆ ಕೈಗೊಂಡು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಬೂಬು ಹೇಳಿದ್ದಾರೆ. ಆದರೆ, ಸರಿಯಾಗಿ ಹಿಂದಿ ವರ್ಣಮಾಲೆ, ತಾವು ಬೋಧಿಸುವ ವಿಷಯದ ಬಗ್ಗೆಯೇ ಸರಿಯಾಗಿ ತಿಳಿದುಕೊಂಡಿರದ ಶಿಕ್ಷಕರು ಸಿಕ್ಕಿಬಿದ್ದಿರುವ ಇಂಥ ಹಲವು ಘಟನೆಗಳು ಜಾರ್ಖಂಡ್‌, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ಕಡೆ ಈ ಹಿಂದೆಯೂ ಹಲವು ಬಾರಿ ವರದಿಯಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಸಿದ್ದು vs ಬೆಲ್ಲದ್‌ ಒಳಮೀಸಲು ಹೆಚ್ಚಳ ಜಟಾಪಟಿ! ಯತ್ನಾಳ್‌ಗೆ ಸಿಎಂ ಸಂವಿಧಾನ ಪಾಠ
ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!