
ತಿರುವನಂತಪುರಂ(ಜು.10): ಗೋಹತ್ಯೆ ಕುರಿತಂತೆ ಕೇಂದ್ರ ಸರ್ಕಾರದ ಇತ್ತೀಚಿನ ನಿಯಮಗಳ ಬಳಿಕ ಮಾಂಸದ ಕೊರತೆಯ ಬಿಸಿ ಅನುಭವಿಸಿದ್ದ ಕೇರಳಿಗರಿಗೆ, ಸೋಮವಾರದಿಂದ ಕೋಳಿ ಮಾಂಸ ಕೂಡಾ ಮಾರುಕಟ್ಟೆಯಲ್ಲಿ ಸಿಗದು.
ಹೌದು. ಜಿಎಸ್ಟಿಗೂ ಮುನ್ನ ಚಿಕನ್ಗೆ ಶೇ.14.5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಜಿಎಸ್ಟಿಯಲ್ಲಿ ಇದಕ್ಕೆ ವಿನಾಯ್ತಿ ನೀಡಲಾಗಿದೆ. ಹೀಗಾಗಿ ಚಿಕನ್ ಅನ್ನು ಕೆಜಿಗೆ 87 ರು.ಗೆ ಮಾರಾಟ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಆದರೆ ಆದರೆ ವ್ಯಾಪಾರಿಗಳು ಸಡ್ಡು ಹೊಡೆದಿದ್ದಾರೆ. ಈ ಕುರಿತು ಭಾನುವಾರ ಕೇರಳ ಪೌಲ್ಟ್ರಿ ಫೆಡರೇಷನ್ ಜೊತೆಗೆ ಸರ್ಕಾರ ನಡೆಸಿದ ಮಾತುಕತೆ ವಿಫಲವಾಗಿದ್ದು, ಸೋಮವಾರದಿಂದ ಅಂಗಡಿ ಬಾಗಿಲು ತೆಗೆಯದೇ ಇರಲು ಚಿಕನ್ ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಹೀಗಾಗಿ ವಿವಾದ ಇತ್ಯರ್ಥವಾಗುವ ತನಕ ರಾಜ್ಯದ ಜನರಿಗೆ ಮಾರುಕಟ್ಟೆಯಲ್ಲಿ ಚಿಕನ್ ಸಿಗದು.
ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಪೌಲ್ಟ್ರಿ ಫೆಡರೇಷನ್ ಅಧ್ಯಕ್ಷ ಎಂ.ತಜುದ್ದೀನ್, ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳುತ್ತಿರುವ 87 ರು., ರೈತರಿಂದ ನಾವು ಕೊಳ್ಳುವ ಬೆಲೆಯಾಗಿದೆ. ಸಾಗಾಣಿಕೆ ವೆಚ್ಚ, ನೌಕರರ ವೇತನ, ಇತರ ಖರ್ಚುಗಳನ್ನು ಸೇರಿಸಿ 100 ರು.ಗಿಂತ ಕಡಿಮೆ ಬೆಲೆಗೆ ಮಾರುವುದು ಸಾಧ್ಯವೇ ಇಲ್ಲ. ಹೀಗಾಗಿ 87 ರು.ಗೆ ಹೇಗೆ ಮಾರಾಟ ಮಾಡಲು ಹೇಗೆ ಸಾಧ್ಯ ಎಂಬುದನ್ನು ಸಚಿವರು ತೋರಿಸಿಕೊಡಬೇಕು ಎಂದು ಸವಾಲು ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.