ನಮ್ಮ ಉತ್ಪನ್ನಗಳನ್ನು ಬಿಟ್ಟರೆ ನಿಮಗೆ ಬೇರೆ ಆಯ್ಕೆಗಳಿಲ್ಲ,ಮುಂದೆ ಗಂಭೀರ ಪರಿಣಾಮ ಎದುರಿಸುತ್ತೀರಿ: ಚೀನಾದಿಂದ ಎಚ್ಚರಿಕೆ

Published : Aug 14, 2017, 05:55 PM ISTUpdated : Apr 11, 2018, 12:58 PM IST
ನಮ್ಮ ಉತ್ಪನ್ನಗಳನ್ನು ಬಿಟ್ಟರೆ ನಿಮಗೆ ಬೇರೆ ಆಯ್ಕೆಗಳಿಲ್ಲ,ಮುಂದೆ ಗಂಭೀರ ಪರಿಣಾಮ ಎದುರಿಸುತ್ತೀರಿ: ಚೀನಾದಿಂದ ಎಚ್ಚರಿಕೆ

ಸಾರಾಂಶ

ಒಂದು ವೇಳೆ ಭಾರತವೂ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಿದರೆ ನಮಗಾಗುವ ನಷ್ಟಕ್ಕಿಂತ ನಿಮ್ಮ ದೇಶವೂ ಎಂದೂ ಕಾಣದ ಆರ್ಥಿಕ ಹೊಡೆತ ಅನುಭವಿಸಬೇಕಾಗುತ್ತದೆ.

ನವದೆಹಲಿ(ಆ.14): ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವೆ ಬಿಗುವಿನ ಪರಿಸ್ಥಿತಿ ಉಂಟಾಗಿರುವ ಮಧ್ಯೆ ಚೀನಾ ಬೇರೆ ರೀತಿಯಲ್ಲಿ ಕ್ಯಾತೆ ತೆಗೆಯಲು ಹೊರಟಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ಉತ್ಪನ್ನಗಳ ಬಳಕೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಚೀನಾ ಎಚ್ಚರಿಕೆ ನೀಡಿದೆ.     

ಭಾರತವು ಚೀನೀ ಉತ್ಪನ್ನಗಳಿಗೆ ಸಂಬಂಧಿಸಿದಂತೆ ರಕ್ಷಣಾ ನೀತಿಯ ಸುಂಕವನ್ನು ಹೇರಬಾರದು.ಇದರಿಂದ ಎರಡು ದೇಶಗಳ ನಡುವಿನ ವ್ಯಾಪಾರಿ ಯುದ್ಧ ಮನೋಭಾವವನ್ನು ಪ್ರಚೋದಿಸಲು ಕಾರಣವಾಗುತ್ತದೆ ಚೀನಾದ ಸರ್ಕಾರಿ ನಿಯಂತ್ರಿತ ಮಾಧ್ಯಮವಾದ 'ಗ್ಲೋಬಲ್ ಟೈಮ್ಸ್' ತನ್ನ ಲೇಖನದ ಮೂಲಕ ಎಚ್ಚರಿಕೆ ನೀಡಿವೆ. ನವದೆಹಲಿಯು ವ್ಯಾಪಾರಿ ನೀತಿಯ ಅನ್ಯ ಮಾರ್ಗದ ಮೂಲಕ ತನ್ನ ದೇಶದ ಮೇಲೆ ಒತ್ತಡ ಹೇರುವುದರಿಂದ ಯಾವುದೇ ಪ್ರಯೋಜನವಿಲ್ಲ. ಜೊತೆಗೆ ತಾನೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ' ಎಂದು ಎಚ್ಚರಿಸಿದೆ.

ಒಂದು ವೇಳೆ ಭಾರತವೂ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಿದರೆ ನಮಗಾಗುವ ನಷ್ಟಕ್ಕಿಂತ ನಿಮ್ಮ ದೇಶವೂ ಎಂದೂ ಕಾಣದ ಆರ್ಥಿಕ ಹೊಡೆತ ಅನುಭವಿಸಬೇಕಾಗುತ್ತದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೊಟ್ಯಂತರ ಮಂದಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಆರ್ಥಿಕ ದುಸ್ಥಿತಿಗೆ ನೀವು ತಲುಪುತ್ತೀರಿ. ನಮ್ಮ ಉತ್ಪನ್ನಗಳ ರೀತಿಯಲ್ಲಿ ಬೇರೆ ಯಾವ ದೇಶದ ಉತ್ಪನ್ನಗಳು ಇಷ್ಟು ಕಡಿಮೆ ಬೆಲೆಗೆ ಗುಣಮಟ್ಟದ ವಸ್ತುಗಳನ್ನು ನೀಡಿವುದಿಲ್ಲ' ಎಂದು ತಿಳಿಸಿದೆ.

ಈಗಾಗಲೆ ಚೀನಾದ 93 ಉತ್ಪನ್ನಗಳ ಮೇಲೆ ರಕ್ಷಣಾ ನೀತಿಯ ಸುಂಕವನ್ನು ವಿಧಿಸಿರುವುದು ಅತ್ಯಂತ ಕೆಟ್ಟ ಕ್ರಮವಾಗಿದ್ದು ಇದನ್ನು ಎದುರಿಸಲು ಭಾರತವು ಸಿದ್ದವಾಗಿರಬೇಕು. ಭಾರತ ಸರಕಾರವು ಚೀನಾದೊಂದಿಗೆ ವ್ಯಾಪಾರಿ ಸಂಬಂಧವನ್ನು ಕಡಿಮೆಗೊಳಿಸಲು ಅತ್ಯಂತ ಹೆಚ್ಚು ಉತ್ಸುಕವಾಗಿದೆ. ಇದು ನಮಗಿಂತಲೂ ನಿಮಗೆ ಹೆಚ್ಚು ಹಾನಿಯುಂಟಾಗುತ್ತದೆ'. ಮುಂದಿನ ದಿನಗಳಲ್ಲಿ ನೀವೇ ಪಶ್ಚಾತ್ತಾಪಪಡುವ ಸ್ಥಿತಿ ಒದಗಿ ಬರುತ್ತದೆ' ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು
ಪಾಕ್‌ ಜಿಂದಾಬಾದ್‌ ಕೇಸ್‌: ಸಿಟಿ ರವಿ ಪ್ರಶ್ನೆಗೆ ಗೃಹಸಚಿವ ಸ್ಫೋಟಕ ಮಾಹಿತಿ