RSS ಬಗ್ಗೆ ಗುಪ್ತ​ಚರ ಮಾಹಿ​ತಿ ಕೋರಿದ ಮುಖ್ಯಮಂತ್ರಿ ನಿತೀಶ್!

Published : Jul 18, 2019, 11:01 AM ISTUpdated : Jul 18, 2019, 11:04 AM IST
RSS ಬಗ್ಗೆ ಗುಪ್ತ​ಚರ ಮಾಹಿ​ತಿ ಕೋರಿದ ಮುಖ್ಯಮಂತ್ರಿ ನಿತೀಶ್!

ಸಾರಾಂಶ

ಮುಖ್ಯಮಂತ್ರಿ ಇದೀಗ ತಮ್ಮ ಮಾಹಿತಿಗಾಗಿ ಗುಪ್ತಚರ ಇಲಾಖೆ ಮೊರೆ ಹೋಗಿದ್ದಾರೆ. ಸಿಎಂ ಗುಪ್ತಚರ ಇಲಾಖೆಯಿಂದ ಬಯಸಿದ ಮಾಹಿತಿ ಏನು?

ಪಟನಾ [ಜು.18]: ಕೇಂದ್ರದಲ್ಲಿ ಸರ್ಕಾ​ರ​ ರಚನೆ ವೇಳೆ ಮಿತ್ರ​ಪ​ಕ್ಷ ಜೆಡಿಯು ಅನ್ನು ನಿರ್ಲ​ಕ್ಷಿ​ಸಿದ ಪರಿ​ಣಾಮ ಜೆಡಿಯು ವರಿಷ್ಟಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾ​ರ್‌ ತಮ್ಮ ಬೆಂಬಲ ವಾಪಸ್‌ ಪಡೆದು ಎನ್‌​ಡಿ​ಎದಿಂದ ಹೊರಬಂದಿ​ದ್ದರು. 

ಇದೀಗ ಬಿಹಾ​ರ​ದಲ್ಲಿ ಬಿಜೆ​ಪಿಯ ತಾರ್ಕಿಕ ಶಕ್ತಿಯಾಗಿ​ರುವ ಆರ್‌​ಎ​ಸ್‌​ಎಸ್‌ ಮತ್ತು ಅದರ 19 ಪ್ರಮುಖ ವ್ಯಕ್ತಿ​ ಅಥವಾ ಶಾಖೆ​ಗಳು ಮತ್ತು ಅದರ ಚಟು​ವ​ಟಿ​ಕೆ​ಗಳ ಕುರಿತು ಗುಪ್ತ​ಚರ ಮಾಹಿತಿ ಸಂಗ್ರ​ಹಿ​ಸು​ತ್ತಿ​ರು​ವುದು ನಿತೀಶ್‌ ಮತ್ತು ಬಿಜೆಪಿ ಮಧ್ಯದ ಬಿಕ್ಕ​ಟ್ಟನ್ನು ಮತ್ತಷ್ಟು ಜಟಿ​ಲ​ಗೊ​ಳಿಸುವ ಸಾಧ್ಯ​ತೆ​ಗ​ಳಿವೆ.

ಸಿಎಂ ಹುದ್ದೆ ಜತೆಗೆ ಗೃಹ ಇಲಾಖೆ ಹಾಗೂ ಗುಪ್ತ​ಚರ ಇಲಾ​ಖೆ​ಯನ್ನೂ ಹೊಂದಿ​ರುವ ನಿತೀಶ್‌ ಕುಮಾರ್ ಇದೀಗ ಒಂದು ವಾರ​ದೊ​ಳ​ಗಾಗಿ ಈ ಕುರಿತ ಮಾಹಿತಿ ನೀಡು​ವಂತೆ ಹೆಚ್ಚು​ವರಿ ಎಸ್ಪಿ​ಗಳ ಮೂಲಕ ಮಾಹಿತಿ ಕೋರಿ​ದ್ದಾರೆ. 

ಅಲ್ಲದೇ 2017ರಲ್ಲಿ ಅಂದಿನ ಬಿಹಾರ ಸಿಎಂ ಲಾಲೂ ಪ್ರಸಾದ ಯಾದವ್‌ ಕೈಗೊಂಡಿದ್ದ ಆರ್‌​ಎ​ಸ್‌​ಎಸ್‌ ನಿಷೇ​ಧದ ಸಾಧ್ಯ​ತೆ​ಗಳ ಬಗ್ಗೆಯೂ ಚಿಂತನೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿದ್ದು, ಈ ಮೂಲಕ ರಾಜ್ಯ ಬಿಜೆ​ಪಿಗೆ ಪೆಟ್ಟು ನೀಡಲು ಮುಂದಾ​ಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ