
ಪಟನಾ [ಜು.18]: ಕೇಂದ್ರದಲ್ಲಿ ಸರ್ಕಾರ ರಚನೆ ವೇಳೆ ಮಿತ್ರಪಕ್ಷ ಜೆಡಿಯು ಅನ್ನು ನಿರ್ಲಕ್ಷಿಸಿದ ಪರಿಣಾಮ ಜೆಡಿಯು ವರಿಷ್ಟಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ತಮ್ಮ ಬೆಂಬಲ ವಾಪಸ್ ಪಡೆದು ಎನ್ಡಿಎದಿಂದ ಹೊರಬಂದಿದ್ದರು.
ಇದೀಗ ಬಿಹಾರದಲ್ಲಿ ಬಿಜೆಪಿಯ ತಾರ್ಕಿಕ ಶಕ್ತಿಯಾಗಿರುವ ಆರ್ಎಸ್ಎಸ್ ಮತ್ತು ಅದರ 19 ಪ್ರಮುಖ ವ್ಯಕ್ತಿ ಅಥವಾ ಶಾಖೆಗಳು ಮತ್ತು ಅದರ ಚಟುವಟಿಕೆಗಳ ಕುರಿತು ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿರುವುದು ನಿತೀಶ್ ಮತ್ತು ಬಿಜೆಪಿ ಮಧ್ಯದ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುವ ಸಾಧ್ಯತೆಗಳಿವೆ.
ಸಿಎಂ ಹುದ್ದೆ ಜತೆಗೆ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಯನ್ನೂ ಹೊಂದಿರುವ ನಿತೀಶ್ ಕುಮಾರ್ ಇದೀಗ ಒಂದು ವಾರದೊಳಗಾಗಿ ಈ ಕುರಿತ ಮಾಹಿತಿ ನೀಡುವಂತೆ ಹೆಚ್ಚುವರಿ ಎಸ್ಪಿಗಳ ಮೂಲಕ ಮಾಹಿತಿ ಕೋರಿದ್ದಾರೆ.
ಅಲ್ಲದೇ 2017ರಲ್ಲಿ ಅಂದಿನ ಬಿಹಾರ ಸಿಎಂ ಲಾಲೂ ಪ್ರಸಾದ ಯಾದವ್ ಕೈಗೊಂಡಿದ್ದ ಆರ್ಎಸ್ಎಸ್ ನಿಷೇಧದ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಮೂಲಕ ರಾಜ್ಯ ಬಿಜೆಪಿಗೆ ಪೆಟ್ಟು ನೀಡಲು ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.