
ನವದೆಹಲಿ : ಭಾಗಶಃ ಪಿಎಫ್ ಹಿಂತೆಗೆತಕ್ಕೆ ಬಡ್ಡಿ ವಿಧಿಸದೇ ಇರುವ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಇನ್ನೂ ಕರ್ತವ್ಯದ ಅವಧಿಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡವರಿಗೆ ಅನುಕೂಲವಾಗಲಿದೆ.
ಏಪ್ರಿಲ್ 13ರಂದು ನೌಕರರ ಭವಿಷ್ಯ ನಿಧಿ ಮಂಡಳಿಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ನೌಕರರು ಒಂದು ಕಂಪನಿಯಲ್ಲಿ ಕೆಲಸ ಬಿಟ್ಟಬಳಿಕ ಎರಡು ತಿಂಗಳಾದರೂ ಇನ್ನೊಂದು ಕಡೆ ಕೆಲಸ ಸಿಕ್ಕದೇ ಹೋದರೆ ಅಂಥವರಿಗೆ ಭಾಗಶಃ ಪಿಎಫ್ ಹಿಂತೆಗೆತಕ್ಕೆ ಬಡ್ಡಿರಹಿತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ಬಾರಿ ಮಾತ್ರ ಹಿಂತೆಗೆತಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಉಳಿದ ಪಿಎಫ್ ಹಣ ಅವರ ಖಾತೆಯಲ್ಲೇ ಉಳಿಯಲಿದ್ದು, ಅದನ್ನು ಫೈನಲ್ ಸೆಟ್್ಲ ಮೆಂಟ್ ವೇಳೆ ನೀಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.