ಮೊಬೈಲ್‌ ಒತ್ತಿದರೆ ರಕ್ಷಣೆಗೆ ಬರ್ತಾರೆ ಪೊಲೀಸರು!

Published : Jun 20, 2018, 07:54 AM IST
ಮೊಬೈಲ್‌ ಒತ್ತಿದರೆ ರಕ್ಷಣೆಗೆ ಬರ್ತಾರೆ ಪೊಲೀಸರು!

ಸಾರಾಂಶ

ಪೊಲೀಸ್‌ ಸೇವೆ ಮತ್ತಷ್ಟುಜನಸ್ನೇಹಿಗೊಂಡಿದ್ದು, ಇನ್ನು ಮುಂದೆ ಠಾಣೆಗಳು ಸೇರಿದಂತೆ ಪೊಲೀಸರ ಸಮಗ್ರ ಮಾಹಿತಿಯನ್ನು ನಾಗರಿಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ‘ಕೆಎಸ್‌ಪಿ’ ಎಂಬ ಹೆಸರಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಿರುವ ಇಲಾಖೆಯು ಮಂಗಳವಾರದಿಂದ ಅದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಿದೆ.  

ಬೆಂಗಳೂರು (ಜೂ. 20):  ಪೊಲೀಸ್‌ ಸೇವೆ ಮತ್ತಷ್ಟುಜನಸ್ನೇಹಿಗೊಂಡಿದ್ದು, ಇನ್ನು ಮುಂದೆ ಠಾಣೆಗಳು ಸೇರಿದಂತೆ ಪೊಲೀಸರ ಸಮಗ್ರ ಮಾಹಿತಿಯನ್ನು ನಾಗರಿಕರು ಆ್ಯಪ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ ‘ಕೆಎಸ್‌ಪಿ’ ಎಂಬ ಹೆಸರಿನಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಿರುವ ಇಲಾಖೆಯು ಮಂಗಳವಾರದಿಂದ ಅದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಿದೆ.

ಈ ಆ್ಯಪ್‌ನಲ್ಲಿ ಪೊಲೀಸ್‌ ಠಾಣೆಗಳು, ಆ ಠಾಣೆಗೆ ಸಂಬಂಧಪಟ್ಟಅಧಿಕಾರಿಗಳ ದೂರವಾಣಿ ಸಂಖ್ಯೆ, ಇ-ಮೇಲ್‌ ಹಾಗೂ ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣ ವಿವರ ಲಭ್ಯವಿದೆ. ಅಲ್ಲದೆ ಸಮೀಪದ ಠಾಣೆಗೆ ನೀವಿರುವ ಜಾಗದಿಂದ ಹೇಗೆ ತಲುಪಬೇಕು ಹಾಗೂ ಎಷ್ಟುದೂರವಿದೆ ಎಂಬ ಮಾಹಿತಿ ಸಹ ತಿಳಿಸಲಾಗಿದೆ.

ನೀವು ಯಾವುದೇ ಅಪಾಯಕ್ಕೆ ಸಿಲುಕಿದರೆ ‘ಎಸ್‌ಓಎಸ್‌’ ಎಂಬ ಬಟನ್‌ ಒತ್ತಿದರೆ ತಕ್ಷಣವೇ ಪೊಲೀಸರು ರಕ್ಷಣೆಗೆ ಧಾವಿಸಲಿದ್ದಾರೆ. ನೀವು ತಿಳಿಸಿದ ಮೊಬೈಲ್‌ ನಂಬರ್‌ಗೆ ನೀವಿರುವ ಜಾಗದ ಮಾಹಿತಿ ಸಮೇತ ಸಂದೇಶ ಬರುತ್ತದೆ. ಅಲ್ಲದೆ, ಕಳುವಾದ ವಾಹನಗಳು, ಕಾಣೆಯಾದವರ ಬಗ್ಗೆ ಎಫ್‌ಐಆರ್‌ ಕುರಿತ ಮಾಹಿತಿಯನ್ನು ಆ್ಯಪ್‌ನಲ್ಲಿ ಪಡೆದುಕೊಳ್ಳಬಹುದು.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ‘ಕೆಎಸ್‌ಪಿ’ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ನಂತರ ಒಂದು ಬಾರಿ ನಿಮ್ಮ ಮೊಬೈಲ್‌ ಸಂಖ್ಯೆ ನಮೂದಿಸಿ ಈ ಸಾಫ್ಟ್‌ವೇರ್‌ ಆಕ್ಟಿವೇಟ್‌ ಮಾಡಿಕೊಳ್ಳಬೇಕು. ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆದು ಈ ಆ್ಯಪ್‌ ಮುಂದಿನ ದಿನಗಳಲ್ಲಿ ಮತ್ತಷ್ಟುಜನ ಸ್ನೇಹಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ್ಯಪ್‌ ಅನ್ನು ‘KSP’ ಎಂದು ಟೈಪ್‌ ಮಾಡಿ Google playstore ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ