
ನವದೆಹಲಿ(ನ.06): ಬೆಳಕನ್ನ ಹಬ್ಬಿಸಬೇಕಾದ ದೀಪಾವಳಿ ರಾಜಧಾನಿ ದೆಹಲಿಯನ್ನ ಕತ್ತಲ ಕೂಪಕ್ಕೆ ತಳ್ಳಿದೆ. ದೀಪಾವಳಿ ಹಬ್ಬದಂದು ಸಿಡಿದ ಭಾರೀ ಪ್ರಮಾಣದ ಪಟಾಕಿಗಳಿಂದಾಗಿ ದೆಹಲಿಯಲ್ಲಿ ಭೀಕರ ವಾಯುಮಾಲಿನ್ಯ ಉಂಟಾಗಿದೆ. ಕಳೆದ 17 ವರ್ಷಗಳಲ್ಲೇ ದಾಖಲೆ ಎನ್ನಬಹುದಾದಷ್ಟು ಮಟ್ಟಕ್ಕೆ ವಾತಾವರಣ ಹದಗೆಟ್ಟಿದೆ. ಮನೆ ಬಿಟ್ಟು ಹೊರಬರಲು ಜನ ಹೆದರುತ್ತಿದ್ದಾರೆ. ವಾತಾವರಣಕ್ಕೆ ಬಂದರೆ ಕೆಮ್ಮು, ಕಣ್ಣಿನ ಉರಿ ಜನರನ್ನ ಬಾಧಿಸುತ್ತಿದೆ. \
ಕೆಟ್ಟ ವಾತಾವರಣದ ಹಿನ್ನೆಲೆ ದೆಹಲಿಯಲ್ಲಿ ಮತ್ತೆ 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲಸಕ್ಕಾಗಿ ಕಚೇರಿಗೆ ತೆರಳುವವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಕೇಜ್ರಿವಾಲ್ ಸೂಚಿಸಿದ್ದಾರೆ.
ನಗರದ ಹಲವೆಡೆ ಸರ್ಕಾರದಿಂದಲೇ ನೀರನ್ನ ಚುಮುಕಿಸುವ ಕಾರ್ಯ ನಡೆಯುತ್ತಿದೆ. ಕೃತಕ ಮಳೆಯಿಂದ ಸಮಸ್ಯೆ ಬಗೆಹರಿಸಲು ಕೇಂದ್ರದ ನೆರವು ಕೇಳುವುದಾಗಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.