
ವಾಷಿಂಗ್ಟನ್ : ಇನ್ನುಮುಂದೆ ನನಗೆ ಓದಿದ್ದೇನು ನೆನಪಲ್ಲಿ ಇರೋದಿಲ್ಲ. ನಾನು ಬುದ್ದಿವಂತನೇ ಅಲ್ಲ ಎಂದು ಕೊರಗುವ ಅಗತ್ಯವಿಲ್ಲ. ಯಾಕೆಂದರೆ ವಿಜ್ಞಾನಿಗಳು ಇದಕ್ಕೂ ಒಂದು ಪರಿಹಾರವನ್ನು ಕಂಡು ಹಿಡಿಯುತ್ತಿದ್ದಾರೆ.
ಕೃತ ಬುದ್ದಿ ಮತ್ತೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಇದಕ್ಕಾಗಿ ಔಷಧವನ್ನು ಶೋಧನೆ ಮಾಡುತ್ತಿದ್ದಾರೆ. ಈ ವ್ಯವಸ್ಥೆ ರಚನಾತ್ಮಕ ಬಲವರ್ಧನೆ ವ್ಯವಸ್ಥೆ ಎಂದು ಹೆಸರಿಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಕಲಿಯಲ್ಲ ಎನ್ನುವ ತಲೆ ನೋವು ಇರದು.
ಎಷ್ಟು ತಿಳಿಸಿ ಹೇಳಿದರು ತಿಳಿದುಕೊಳ್ಳುವುದಿಲ್ಲ ಎನ್ನುವ ದೂರುಗಳು ಈ ಹೊಸ ಮೆಡಿಸಿನ್ ನಿಂದ ದೂರವಾಗಲಿದೆ. ಕೃತಕವಾಗಿ ಔಷಧವು ವಿದ್ಯಾರ್ಥಿಗಳಿಗೆ ಶಿಕ್ಷಕರ 2 ನರ ಮಂಡಲಗಳು ಹೊಂದಾಣಿಕೆಯಾಗಿ ಕಲಿಕಾ ಸಾಮರ್ಥ್ಯ ಹೆಚ್ಚಳವಾಗುವಂತೆ ಮಾಡುತ್ತದೆ.
ಇದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಹೊಸತನವೊಂದು ಆರಂಭವಾಗಲಿದೆ ಎಂದು ನಾರ್ಥ್ ಕರೋಲಿನ ವಿಶ್ವವಿದ್ಯಾಲಯದ ಅಲೆಕ್ಸಾಂಡರ್ ಟ್ರೋಸ್ಪಾ ಹೇಳಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಈ ಔಷಧ ಸೇವನೆಯಿಂದ ಹೆಚ್ಚಳ ಮಾಡಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.