ಕಾಡೋದೆ ಆಸ್ಪತ್ರೆ ಈ ಪರಿ ಕಾಡೋದೆ?: ಬಾಲಕನ ಮರ್ಮಾಂಗ ಕಟ್!

Published : Jun 25, 2018, 08:49 PM IST
ಕಾಡೋದೆ ಆಸ್ಪತ್ರೆ ಈ ಪರಿ ಕಾಡೋದೆ?: ಬಾಲಕನ ಮರ್ಮಾಂಗ ಕಟ್!

ಸಾರಾಂಶ

ಕಾಡೋದೆ ಆಸ್ಪತ್ರೆ ಈ ಪರಿ ಕಾಡೋದೆ ಖಾಸಗಿ ಆಸ್ಪತ್ರೆ ವೈದ್ಯನ ಯಡವಟ್ಟು ಶಸ್ತ್ರಚಿಕಿತ್ಸೆ ವೇಳೆ ಬಾಲಕನ ಮರ್ಮಾಂಗ್ ಕಟ್ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಘಟನೆ  

ಬೀದರ್(ಜೂ.25): ಖಾಸಗಿ ವೈದ್ಯನ ಯಡವಟ್ಟಿಗೆ ಬಾಲಕನೋವರ್ವ ತನ್ನ ಮರ್ಮಾಂಗವನ್ನೇ ಕಳೆದುಕೊಂಡ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಕಾಡೋದೆ ಕ್ಲಿನಿಕ್‌ನಲ್ಲಿ ಬಾಲಕನಿಗೆ ಶಸ್ತ್ರಚಿಕಿತ್ಸೆ  ಮಾಡಲು ಹೋಗಿ ಆತನ ಮರ್ಮಾಂಗವನ್ನೇ ವೈದ್ಯರು ಕತ್ತರಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ವೈದ್ಯರಾದ ಮಲ್ಲಿಕಾರ್ಜುನ್ ಕಾಡೋದೆ ನಿರ್ಲಕ್ಷ್ಯತನ ತೋರಿ ತಮ್ಮ ಮಗನ ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂದು ಪೋಷಕರಾದ ಗುಂಡಮ್ಮ ಮತ್ತು ದಶರಥ ಆರೋಪಿಸಿದ್ದಾರೆ. ಅಲ್ಲದೇ ಘಟನೆ ಬಳಿಕ ಆಸ್ಪತ್ರೆ ಮುಂದೆ ಬಾಲಕನ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. 

ಇನ್ನು ಕಾಡೋದೆ ಆಸ್ಪತ್ರೆ ಅನಧಿಕೃತವಾಗಿದ್ದು, ವೈದ್ಯ ಮಲ್ಲಿಕಾರ್ಜುನ್ ಕೇವಲ ಬಿಇಎಂಎಸ್ ಪದವಿ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಮಲ್ಲಿಕಾರ್ಜುನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ