
ನವದೆಹಲಿ, (ಅ.23): ಪಂಜಾಬಿನ ಅಮೃತಸರದಲ್ಲಿ ದಸರಾ ಆಚರಣೆಯ ವೇಳೆ ರೈಲು ಹರಿದು 61 ಮಂದಿ ಸಾವನ್ನಪ್ಪಿದ ಘಟನೆ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, 2015ರಿಂದ 2017ರ ಅವಧಿಯಲ್ಲಿ ರೈಲು ಡಿಕ್ಕಿಯಾಗಿ ಸುಮಾರು 50,000 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ಸಂಗತಿ ಭಾರತೀಯ ರೈಲ್ವೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.
ಈ ಪ್ರಕಾರ ಹೆಚ್ಚಿನ ರೈಲು ಅಪಘಾತಗಳು ಉತ್ತರ ರೈಲ್ವೆ ವಲಯದಲ್ಲಿ ಸಂಭವಿಸಿದ್ದು, 7,908 ಮಂದಿ ರೈಲು ಹರಿದು ಸಾವನ್ನಪ್ಪಿದ್ದಾರೆ. ದಕ್ಷಿಣ ವಲಯದಲ್ಲಿ 6,149 ಮಂದಿ ಹಾಗೂ ಪೂರ್ವ ರೈಲ್ವೆ ವಲಯದಲ್ಲಿ 5,670 ಮಂದಿ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ.
ರೈಲ್ವೆ ಕಾಯ್ದೆ 1989ರ 147ನೇ ಸೆಕ್ಷನ್ ಪ್ರಕಾರ ರೈಲ್ವೆ ಆವರಣವನ್ನು ರೈಲ್ವೆ ಹಳಿಗಳು ಮತ್ತು ರೈಲ್ವೆ ಆವರಣವನ್ನು ಅನುಮತಿ ಇಲ್ಲದೇ ಪ್ರವೇಶಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ಸಂಬಂಧ ರೈಲ್ವೆ ಪೊಲೀಸರು 1,20,923 ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ