
ಕೊಚ್ಚಿ(ಡಿ.9): ಓಖಿ ಚಂಡಮಾರುತದ ಬಳಿಕ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ನೌಕಾಪಡೆ ಲಕ್ಷದ್ವೀಪ ಕರಾವಳಿಯಲ್ಲಿ 180 ಜನರನ್ನೊಳಗೊಂಡ 17 ಬೋಟ್’ಗಳನ್ನು ಪತ್ತೆಹಚ್ಚಿದೆ.
ಐಎನ್ಎಸ್ ಕಲ್ಪೇನಿ ಹಡಗನ್ನು ಲಕ್ಷದ್ವೀಪದ ಕರಾವಳಿಗೆ ಶೋಧ ಕಾರ್ಯಚರಣೆಗೆ ರವಾನಿಸಲಾಗಿತ್ತು. ಆದರೆ ಚಂಡಮಾರುತದ ವೇಳೆ ನಾಪತ್ತೆಯಾದ 100 ಮೀನುಗಾರರು ಪತ್ತೆಯಾಗಿರುವ 180 ಜನರಲ್ಲಿ ಸೇರಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.
ಚಂಡಮಾರುತದಿಂದ ಹಾನಿಗೀಡಾಗದ ಬೋಟಿನಲ್ಲಿರುವವರು ಮೀನುಗಾರಿಕೆ ಮುಂದುವರಿಸಿದ್ದಾರೆ. ಲಕ್ಷದ್ವೀಪದ ಕರಾವಳಿ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.