
ಚಿಕ್ಕಮಗಳೂರು (ಮೇ.02): ಇತ್ತೀಚೆಗೆ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಮದುವೆಯ ವೇಳೆ ವರನ ಅಪೇಕ್ಷೆಯಂತೆ ರಾಷ್ಟ್ರಗೀತೆಯನ್ನು ಹಾಡಿದ ಅಪರೂಪದ ಪ್ರಸಂಗವೊಂದು ಚಿಕ್ಕಮಗಳೂರಿನಲ್ಲಿ ನಡೆಯಿತು.
ಇಲ್ಲಿನ ಮಾರುತಿ ನಗರದ ನಿವಾಸಿ ದಕ್ಷಿಣ ಆಫ್ರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಬಿ.ಎಸ್. ಶ್ರೀನಿವಾಸ ರಾಜೇ ಅರಸ್ ಹಾಗೂ ಎಂ. ಸಂತ ಅರಸ್ ಅವರ ವಿವಾಹ ಭಾನುವಾರ ನಡೆದಿತ್ತು. ಈ ವೇಳೆ ಮಂಗಳ ಗೀತೆ ಮುಗಿಯುತ್ತಿದ್ದಂತೆ ಶ್ರೀನಿವಾಸ್ ರಾಷ್ಟ್ರಗೀತೆಯ ಧ್ವನಿ ಮುದ್ರಿಕೆ ಹಾಕುವಂತೆ ಸೂಚಿಸಿದರು. ರಾಷ್ಟ್ರಗೀತೆ ಕೇಳಿ ಬರುತ್ತಿದ್ದಂತೆ ಇಡೀ ಮದುವೆ ಮನೆಯಲ್ಲಿದ್ದವರೆಲ್ಲ ಎಚ್ಚೆತ್ತುಕೊಂಡು ಎದ್ದು ನಿಂತು ಗೌರವ ಸಲ್ಲಿಸಿದರು. ಈ ಅಪರೂಪದ ಪ್ರಸಂಗ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.