ನಾರಿಮನ್ ಮನವೊಲಿಕೆ ಯಶಸ್ವಿ: ರಾಜ್ಯದ ಪರ ವಾದಿಸಲು ಒಪ್ಪಿದ ನಾರಿಮನ್

By Internet DeskFirst Published Oct 4, 2016, 6:22 AM IST
Highlights

ಬೆಂಗಳೂರು(ಅ.04): ಕಾವೇರಿ ವಿಚಾರದಲ್ಲಿ  ರಾಜ್ಯದ ಪರ ವಾದಿಸಲು ವಕೀಲ ಪಾಲಿ ನಾರಿಮನ್​ ಸಮ್ಮತಿ ಸೂಚಿಸಿದ್ದಾರೆ.

ನಿನ್ನೆಯಷ್ಟೇ ನೀರು ಬಿಡದಿದ್ದರೆ ವಾದ ಮಾಡಲ್ಲ ಅಂತ ನಾರಿಮನ್​ ಹೇಳಿದ್ದರು. ಆದರೆ, ನಾರಿಮನ್​ ಮನವೊಲಿಸುವಲ್ಲಿ ರಾಜ್ಯದ ಹಿರಿಯ ನಾಯಕರು ಯಶಸ್ವಿಯಾಗಿದ್ದಾರೆ. ಇದರ ಜೊತೆಗೆ ನಾರಿಮನ್​'ಗೆ ಪತ್ರ ಬರೆದಿದ್ದ ಮಾಜಿ ಪ್ರಧಾನಿ ದೇವೇಗೌಡರು ಪತ್ರ ಬರೆದಿದ್ದರು. ಕೇಂದ್ರ ಸಚಿವ ಅನಂತ್​​ಕುಮಾರ್, ಸಚಿವ ಎಂ.ಬಿ.ಪಾಟೀಲ್​​ ಮತ್ತೆ ವಾದ ಮಾಡುವಂತೆ ಮನವಿ ಮಾಡಿಕೊಂಡಿದ್ದರು.

Latest Videos

ನಾಯಕರ ಮನವಿಗೆ ಒಪ್ಪಿರುವ ನಾರಿಮನ್​​ ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಲಿದ್ದಾರೆ.

click me!