
ನವದೆಹಲಿ(ಆ. 09): ಕ್ವಿಟ್ ಇಂಡಿಯಾ ಚಳವಳಿಗೆ ಪ್ರಧಾನಿ ನರೇಂದ್ರ ಮೋದಿ ಹೊಸ ಭಾಷ್ಯ ಬರೆದಿದ್ದಾರೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಕೈಗೊಂಡಿದ್ದ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆಯ ಸಂದರ್ಭವಾದ ಇಂದು ನರೇಂದ್ರ ಮೋದಿ ಆ ಐತಿಹಾಸಿಕ ಕ್ಷಣವನ್ನು ಸ್ಮರಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ಕೋಮುವಾದ, ಜಾತಿವಾದ ಮತ್ತು ಭ್ರಷ್ಟಾಚಾರಗಳಂತಹ ಸಮಸ್ಯೆಗಳನ್ನು ಭಾರತದಿಂದ ಮುಕ್ತಗೊಂಡಿಸಿ 2022ರಷ್ಟರಲ್ಲಿ ನವಭಾರತ ನಿರ್ಮಾಣ ಮಾಡಬೇಕೆಂದು ಕರೆ ನೀಡಿದ್ದಾರೆ.
"ಮಹಾತ್ಮ ಗಾಂಧಿ ನೇತೃತ್ವದಲ್ಲಿ ನಡೆದ 1942-47ರವರೆಗಿನ ಕ್ವಿಟ್ ಇಂಡಿಯಾ ಚಳವಳಿಯ 5 ವರ್ಷದಲ್ಲಿ ಭಾರತವು ಬ್ರಿಟಿಷ್ ವಸಾಹತುಶಾಹಿಯ ಬೆನ್ನೆಲುಬು ಮುರಿದು ಭಾರತಕ್ಕೆ ಹೊಸ ಜಾಗೃತಿ ಮೂಡಿಸಿತು. ಹೊಸ ಹುಮ್ಮಸ್ಸು ಹುಟ್ಟಿಕೊಂಡಿತು" ಎಂದು ಮೋದಿ ಹೇಳಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದ ಗೆಲುವಿನ ಮಹತ್ವದ ಬಗ್ಗೆ ಮಾತನಾಡಿದ ಪ್ರಧಾನಿ, "ನಮ್ಮ ಸ್ವಾತಂತ್ರ್ಯವು ನಮ್ಮ ದೇಶಕ್ಕೊಂದೇ ಸಂಬಂಧಿಸಿದ್ದಲ್ಲ. ಜಗತ್ತಿನ ಇತರ ಭಾಗಗಳಲ್ಲಿನ ವಸಾಹತುಶಾಹಿ ಸಾಮ್ರಾಜ್ಯಗಳ ಅಂತ್ಯದ ಅರಂಭಕ್ಕೆ ನಮ್ಮದೇ ಮುನ್ನುಡಿಯಾಯಿತು," ಎಂದು ಅಭಿಪ್ರಾಯಪಟ್ಟಿದ್ದಾರೆ.
1942-47ರವರೆಗೆ ಇದ್ದ ಹೋರಾಟದ ಹುಮ್ಮಸ್ಸನ್ನು 2017ರಿಂದ 2022ರ ಅವಧಿಯಲ್ಲೂ ಅವಳಡಿಸಿಕೊಳ್ಳಬೇಕು, ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.