
ಮೈಸೂರು[ಅ.19]: ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು ಅರಮನೆ ಅಂಗಳದಲ್ಲಿ ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.
ಬೆಳಗ್ಗೆ 8.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಆಗಮನ. ಪಟ್ಟದ ಆನೆಯೊಂದಿಗೆ ಪಟ್ಟದ ಕುದುರೆ, ಹಸು ಸಾಥ್.
ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದಾಗಿ ಉತ್ತರ ಪೂಜೆ ಹಾಗೂ ವಜ್ರಮುಷ್ಠಿ ಕಾಳಗವನ್ನು ರದ್ದು ಮಾಡಲಾಗಿದೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬೆಳ್ಳಿ ರಥದಲ್ಲಿ ವಿಜಯ ಯಾತ್ರೆ ನೆರವೇರಲಿದೆ.
ಬೆಳ್ಳಿ ರಥದಲ್ಲಿ ಕುಳಿತು ದೇವಾಲಯಕ್ಕೆ ಯಾತ್ರೆಗೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿರುವ ಯದುವೀರ್.
ವಿಜಯ ಯಾತ್ರೆ ನಂತರ ಶ್ರೀ ಚಾಮುಂಡೇಶ್ವರಿ ಪ್ರತಿಮೆ ಸ್ಥಳಾಂತರ
ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಬಿಜಯ ಮಾಡಲಿರುವ ಪ್ರತಿಮೆ.
ನಂತರ ಜಂಬೂ ಸವಾರಿಗೆ ತೆರಳಲಿರುವ ಉತ್ಸವ ಮೂರ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.