ಮೈಸೂರಿನ ದಸರಾದಲ್ಲಿ ತಂಪೆರದ ವರುಣ

Published : Oct 11, 2016, 10:28 AM ISTUpdated : Apr 11, 2018, 12:55 PM IST
ಮೈಸೂರಿನ ದಸರಾದಲ್ಲಿ ತಂಪೆರದ ವರುಣ

ಸಾರಾಂಶ

ನಾಡಹಬ್ಬ ದಸರಾಕ್ಕೆ ರಾಜ್ಯದ ಜನತೆಗೆ ಶುಭಕೋರಿರುವ ಸಿದ್ದರಾಮಯ್ಯ, ಉತ್ತಮ ಮಳೆ ಬೆಳೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿಕೊಳ್ಳುತ್ತೇನೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಹೇಳಿದ್ದರು.

ಮೈಸೂರು(ಅ.11): ಮಳೆಯಿಲ್ಲದೆ ಬಸವಳಿದಿದ್ದ ರಾಜ್ಯಕ್ಕೆ ನಾಡಹಬ್ಬ ದಸರಾದಂದು ಮೈಸೂರಿನಲ್ಲಿ ವರುಣನ ಸಿಂಚನವಾಗಿದೆ.

ನಾಡಹಬ್ಬ ದಸರಾಕ್ಕೆ ರಾಜ್ಯದ ಜನತೆಗೆ ಶುಭಕೋರಿರುವ ಸಿದ್ದರಾಮಯ್ಯ, ಉತ್ತಮ ಮಳೆ ಬೆಳೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿಕೊಳ್ಳುತ್ತೇನೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಹೇಳಿದ್ದರು. ಇದಾದ ಕೆಲಹೊತ್ತಿನಲ್ಲೇ ಬನ್ನಿ ಪೂಜೆ ಮುಗಿಯುತ್ತಿದ್ದಂತೆ ದಸರಾ ಮೆರವಣಿಗೆಯ ಸಂದರ್ಭದಲ್ಲೇ ಮೈಸೂರಿನಲ್ಲಿ ಮಳೆ ತಂಪೆರೆದಿದೆ.

ನಂದಿಧ್ವಜ ಪೂಜೆ ಬಳಿಕ ಮಾತನಾಡಿದ ಸಿ.ಎಂ. ಸಿದ್ದರಾಮಯ್ಯ, ಇಂದು ನಾಳೆ ಹಿಂಗಾರು ಮಳೆಯಾದರೆ ರೈತರ ಮೊಗದಲ್ಲಿ ಸಂತಸ ಉಂಟಾಗುತ್ತದೆ. ಕಾವೇರಿ ನೀರಿನ ಕುರಿತು ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ. ಏಕೆಂದರೆ ನ್ಯಾಯ ನಮ್ಮ ಪರ ಇದೆ ಎಂದಿದ್ದರು.  

ಸುಮಾರು 16 ವರ್ಷಗಳ ನಂತರ ದಸರಾ ಮೆರವಣಿಗೆ ಸಂದರ್ಭದಲ್ಲಿ ವರುಣನ ಸಿಂಚನವಾಗಿದ್ದು. ದಸರಾ ಜಂಬೂಸವಾರಿ ನೋಡಲು ಬಂದ ಪ್ರೇಕ್ಷಕರು ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಯ ಸಹಾಯ ಪಡೆಯಬೇಕಾದ ಪರಿಸ್ಥಿತಿ ಉಂಟಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನದಿ ಸಮೀಪ ಡೆತ್ನೋಟ್ ಬರೆದಿಟ್ಟು ರೇ*ಪ್ ಆರೋಪಿ ಎಸ್ಕೇಪ್: ಆತನಿಗಾಗಿ ನದಿಯಲ್ಲಿ 3 ದಿನ ಹುಡುಕಿದ ಪೊಲೀಸರು
ಒಪ್ಪೊ ಫೈಂಡ್ X9 ಸೀರಿಸ್, ಪ್ರೋ ಲೆವಲ್ ಕ್ಯಾಮೆರಾ,AI ಟೂಲ್ಸ್ ಜೊತೆ ಸುದೀರ್ಘ ಸಮಯದ ಬ್ಯಾಟರಿ ಸ್ಮಾರ್ಟ್‌ಫೋನ್