ಹಿಂದೂಗಳಿಗೆ ಅಯೋಧ್ಯೆ ಜಾಗ ಬಿಟ್ಟುಕೊಡಿ: ಮುಸ್ಲಿಮರಿಗೆ ಶಿಯಾ ಮುಖಂಡ ಸಲಹೆ

Published : Aug 13, 2017, 04:12 PM ISTUpdated : Apr 11, 2018, 12:42 PM IST
ಹಿಂದೂಗಳಿಗೆ ಅಯೋಧ್ಯೆ ಜಾಗ ಬಿಟ್ಟುಕೊಡಿ: ಮುಸ್ಲಿಮರಿಗೆ ಶಿಯಾ ಮುಖಂಡ ಸಲಹೆ

ಸಾರಾಂಶ

ರಾಮ ಮಂದಿರವಿರುವ ಅಯೋಧ್ಯೆಯ ವಿವಾದಿತ ಭೂಮಿಯನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡುವಂತೆ ಶಿಯಾ ಸಮುದಾಯದ ಧಾರ್ಮಿಕ ಮುಖಂಡ ಮೌಲಾನಾ ಕಲ್ಬೆ ಸಾದಿಕ್ ಸಲಹೆ ನೀಡಿದ್ದಾರೆ.

ನವದೆಹಲಿ(ಆ.13): ರಾಮ ಮಂದಿರವಿರುವ ಅಯೋಧ್ಯೆಯ ವಿವಾದಿತ ಭೂಮಿಯನ್ನು ಮುಸ್ಲಿಮರು ಹಿಂದೂಗಳಿಗೆ ಬಿಟ್ಟುಕೊಡುವಂತೆ ಶಿಯಾ ಸಮುದಾಯದ ಧಾರ್ಮಿಕ ಮುಖಂಡ ಮೌಲಾನಾ ಕಲ್ಬೆ ಸಾದಿಕ್ ಸಲಹೆ ನೀಡಿದ್ದಾರೆ.

ಅಯೋಧ್ಯೆಯ ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ ಎಂದು ಸುಪ್ರೀಂಕೋರ್ಟ್‌ಗೆ ಇತ್ತೀಚೆಗಷ್ಟೇ ಶಿಯಾ ವಕ್ಫ್ ಮಂಡಳಿ ಅಫಿಡವಿಟ್ ಸಲ್ಲಿಸಿದೆ. ಈ ಬೆನ್ನಲ್ಲೇ ಮುಂಬೈನಲ್ಲಿ ನಡೆದ ವಿಶ್ವ ಶಾಂತಿ ಹಾಗೂ ಸಾಮರಸ್ಯ ಸಮಾವೇಶದಲ್ಲಿ ಶಿಯಾ ಧಾರ್ಮಿಕ ಮುಖಂಡರು ಈ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆಯ ವಿವಾದಿತ ಸ್ಥಳದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ತೀರ್ಪಿನ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕೋರ್ಟ್ ತೀರ್ಪು ತಮ್ಮ ಪರವಾಗಿರದಿದ್ದರೆ ಅದನ್ನು ಮುಸ್ಲಿಮರು ಶಾಂತಿಯುತವಾಗಿ ಸ್ವೀಕರಿಸಬೇಕು. ಒಂದು ವೇಳೆ ಸುಪ್ರೀಂ ತೀರ್ಪು ತಮ್ಮ ಪರವಾಗಿದ್ದರೆ, ಆಗ ಆ ಭೂಮಿಯನ್ನು ಹಿಂದೂಗಳಿಗೆ ಸಂತೋಷದಿಂದ ಕೊಡಬೇಕು ಎಂದು ಮೌಲಾನಾ ಅವರು ಸಲಹೆ ನೀಡಿದ್ದಾರೆ. ಎರಡೂ ಸಮುದಾಯಗಳು ಗೌರವಯುತವಾಗಿ ಈ ಪ್ರಕರಣವನ್ನು ಪರಿಹರಿಸಿಕೊಳ್ಳಬೇಕು. ಒಂದನ್ನು ಕೊಡುವುದರಿಂದ ಸಾವಿರದಷ್ಟು ಪಡೆದುಕೊಳ್ಳಬಹುದು ಎಂದು ಮೌಲಾನಾ ಅಭಿಪ್ರಾಯಪಟ್ಟಿದ್ದಾರೆ.

ವಿವಾದಿತ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣವಾಗಲಿ. ಹಾಗೆಯೇ ಆ ಸ್ಥಳದಿಂದ ದೂರದಲ್ಲಿ ಹಾಗೂ ಮುಸ್ಲಿಂ ಸಮುದಾಯದ ಪ್ರದೇಶದಲ್ಲಿ ಬಾಬ್ರಿ ಮಸೀದಿ ನಿರ್ಮಾಣವಾಗಲಿ. ಬಾಬ್ರಿ ಮಸೀದಿ ಶಿಯಾ ಆಸ್ತಿಯಾಗಿದ್ದರಿಂದ ಸುನ್ನಿ ಮಂಡಳಿಗೆ ಇದರ ಮೇಲೆ  ಹಕ್ಕು ಇಲ್ಲ ಎಂದು ಸುಪ್ರೀಂಗೆ ವಕ್ಫ್ ಮಂಡಳಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ