
ನವದೆಹಲಿ[ಸೆ. 22] 'ಭಾರತದಲ್ಲಿ ವಾಸಿಸುವ ಮುಸ್ಲಿಮರು ಉಳಿದ ಇಸ್ಲಾಮಿಕ್ ರಾಷ್ಟ್ರದಲ್ಲಿ ವಾಸಿಸುವ ಮುಸ್ಲಿಮರಿಗಿಂತ ಅದೃಷ್ಟಶಾಲಿಗಳು' ಹೀಗೇಂದು ಹೇಳಿಕೆ ಕೊಟ್ಟಿದ್ದು ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ.
ತಮ್ಮ ಹೇಳಿಕೆಯನ್ನು ಮಾರ್ಕ್ ಉದಾಹರಣೆ ಸಮೇತ ಹೇಳುವ ಪ್ರಯತ್ನ ಮಾಡಿದ್ದಾರೆ. ದೆಹಲಿಯ ನಿಜಾಮುದ್ದೀನ್ ಏರಿಯಾದಲ್ಲಿ ಆದ ಘಟನಾವಳಿಯೊಂದನ್ನು ಹೇಳಿದ್ದಾರೆ.
ಮುಸ್ಲಿಮರು ಇಲ್ಲಿ ಯಾವುದೇ ಇಸ್ಲಾಮಿಕ್ ಸಂಪ್ರದಾಯದಲ್ಲಿ ಪೂಜಿಸಬಹುದು. ತಾವು ವಾಸಿಸುವ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ತಬ್ಲಿಘಿ ಜಮಾಅತ್ ಕೇಂದ್ರ ಕಚೇರಿ ಇದೆ ಮತ್ತು ಅವು ತುಂಬಾ ಕಟ್ಟುನಿಟ್ಟಾದ ಮತ್ತು ಸಾಂಪ್ರದಾಯಿಕವಾಗಿವೆ ಅದರ ಪಕ್ಕದಲ್ಲಿ, ಜನರು ನಿಜಾಮುದ್ದೀನ್ ಉಲಿಯಾ ಸಮಾಧಿಯಲ್ಲಿ ಪ್ರಾರ್ಥನೆ ಮತ್ತು ಕವ್ವಾಲಿಸ್ ಹಾಡುವ ಸೂಫಿ ಸಂಪ್ರದಾಯವಿದೆ ಎಂಬ ಆಧಾರದ ವಿವರಣೆ ನೀಡಿದ್ದಾರೆ.
ಎಲ್ಲರಿಗೆ ಗೊತ್ತಿರುವಂತೆ ಭಾರತ ವೈವಿಧ್ಯತೆಯಲ್ಲಿ ಏಕತೆಗೆ ಹೆಸರಾಗಿದೆ. ಇಂಥ ದೇಶದಲ್ಲಿಯೂ ಆಗಾಗ ಭಿನ್ನ ಸ್ವರ ಕೇಳಿಬರುವುದು ಮಾತ್ರ ವಿಚಿತ್ರ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.