ಮುಂದುವರೆದ ಭೀಮಾತೀರದ ರಕ್ತಚರಿತ್ರೆ!: ಖಾಕಿಗುಂಡಿಗೆ ಹಂತಕ ಧರ್ಮರಾಜ್ ಬಲಿ

Published : Oct 30, 2017, 11:32 AM ISTUpdated : Apr 11, 2018, 01:13 PM IST
ಮುಂದುವರೆದ ಭೀಮಾತೀರದ ರಕ್ತಚರಿತ್ರೆ!: ಖಾಕಿಗುಂಡಿಗೆ ಹಂತಕ ಧರ್ಮರಾಜ್ ಬಲಿ

ಸಾರಾಂಶ

ಭೀಮಾತೀರ ಮತ್ತೆ ಬೆಚ್ಚಿಬಿದ್ದಿದೆ. ಭೀಮಾತೀರದಲ್ಲಿ ಮತ್ತೊಂದು ಗುಂಡಿನ ಮೊರೆತವಾಗಿದೆ. ಭೀಮಾತೀರದ ಮತ್ತೊಬ್ಬ ಹಂತಕ ಧರ್ಮರಾಜ್​​ ಪೊಲೀಸರ ಫೈರಿಂಗ್​​'ನಲ್ಲಿ ಹೆಣವಾಗಿದ್ದಾನೆ.

ವಿಜಯಪುರ(ಅ.30): ಭೀಮಾತೀರ ಮತ್ತೆ ಬೆಚ್ಚಿಬಿದ್ದಿದೆ. ಭೀಮಾತೀರದಲ್ಲಿ ಮತ್ತೊಂದು ಗುಂಡಿನ ಮೊರೆತವಾಗಿದೆ. ಭೀಮಾತೀರದ ಮತ್ತೊಬ್ಬ ಹಂತಕ ಧರ್ಮರಾಜ್​​ ಪೊಲೀಸರ ಫೈರಿಂಗ್​​'ನಲ್ಲಿ ಹೆಣವಾಗಿದ್ದಾನೆ.

ಪುತ್ರಪ್ಪ ಸಾಹುಕಾರ್ ಹಾಗೂ ಫಯಾಜ್ ಮುಷರಫ್ ಕೊಲೆಯಲ್ಲಿ ಧರ್ಮರಾಜ್​ ಆರೋಪಿಯಾಗಿದ್ದ. ಕೆಲ ದಿನಗಳ ಹಿಂದೆ ಜಾಮೀನು ಮೇರೆಗೆ ಧರ್ಮರಾಜ್​​ ಹೊರಬಂದಿದ್ದ .ಇತ್ತೀಚೆಗೆ  ಹಂತಕ ಧರ್ಮರಾಜ್ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ ಆರೋಪ ಕೇಳಿ ಬರುತ್ತಿತ್ತು. ಮಾಹಿತಿ ಮೇರೆಗೆ ಧರ್ಮರಾಜ್ ಮನೆಗೆ ಪೊಲೀಸರು ಪರಿಶೀಲನೆ ನಡೆಸಲು ಮುಂದಾದ್ರು.

ಪೊಲೀಸರ ದಾಳಿ ವೇಳೆ ಹಂತಕ ಧರ್ಮರಾಜ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಆತ್ಮರಕ್ಷಣೆಗಾಗಿ ಪೊಲಿಸರು ಹಾರಿಸಿದ ಗುಂಡಿನ ದಾಳಿಯಲ್ಲಿ ಧರ್ಮರಾಜ್​ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಪಿಎಎಸ್'​ಐ ಗೋಪಾಲ್​​'ಗೆ 2 ಗುಂಡು ತಗುಲಿವೆ. ಅವ್ರನ್ನ ಸೋಲ್ಹಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!
ದೇಶ ವಿಭಜನೆ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್