ಮುಂಬೈನ ಭಕ್ತಿ ವೇದಾಂತ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಸರ್ಜರಿ ನಡೆಸುವ ಮೂಲಕ ಪಿತ್ತಕೋಶದಲ್ಲಿದ್ದ 2350 ಕಲ್ಲುಗಳನ್ನು ತೆಗೆದಿದ್ದಾರೆ.
ಮುಂಬೈ : ಮುಂಬೈನ ಭಕ್ತಿ ವೇದಾಂತ ಆಸ್ಪತ್ರೆಯ ವೈದ್ಯರು ಮಹಿಳೆಯೋರ್ವರಿಗೆ ಸರ್ಜರಿ ನಡೆಸುವ ಮೂಲಕ ಪಿತ್ತಕೋಶದಲ್ಲಿದ್ದ 2350 ಕಲ್ಲುಗಳನ್ನು ತೆಗೆದಿದ್ದಾರೆ.
50 ವರ್ಷದ ಮಹಿಳೆಗೆ ಕಳೆದ 2016ರ ನವೆಂಬರ್ ತಿಂಗಳಿನಿಂದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವೇಳೆ ವೈದ್ಯರು ಸರ್ಜರಿ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿತ್ತು.
ಈ ನಿಟ್ಟಿನಲ್ಲಿ ಆಕೆ ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಆಕೆಯ ಪಿತ್ತಕೋಶದಿಂದ ಸಾವಿರಾರು ಕಲ್ಲುಗಳನ್ನು ಹೊರತೆಗೆಯಲಾಗಿದೆ.
ವಿಪರೀತವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆ ಯಾವುದೇ ರೀತಿಯಾದ ಚಿಕಿತ್ಸೆ ಪಡೆದುಕೊಂಡರೂ ಕೂಡ ಕಡಿಮೆಯಾಗಿರಲಿಲ್ಲ. ಬಳಿಕ ಚಿಕಿತ್ಸೆ ನಡೆಸಲಾಗಿದ್ದು, ಈ ವೇಳೆ ಆಕೆಯ ಹೊಟ್ಟೆಯಲ್ಲಿದ್ದ ಕಲ್ಲುಗಳನ್ನು ಹೊರಕ್ಕೆ ತೆಗೆಯಲಾಗಿದೆ.