ಧೋನಿಯನ್ನೇ ಯಾಮಾರಿಸಿದ ಕಳ್ಳರು

Published : Mar 19, 2017, 05:42 AM ISTUpdated : Apr 11, 2018, 12:51 PM IST
ಧೋನಿಯನ್ನೇ ಯಾಮಾರಿಸಿದ ಕಳ್ಳರು

ಸಾರಾಂಶ

ಧೋನಿ ಪ್ರಸ್ತುತ ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿ ವಿಜಯ್ ಹಜಾರೆ ಟೂರ್ನ'ಮೆಂಟ್'ನಲ್ಲಿ ಆಡುತ್ತಿದ್ದಾರೆ.2 ದಿನಗಳ ಹಿಂದೆ ತಮ್ಮ ತಂಡದ ಆಟಗಾರರ ಜೊತೆ ದೆಹಲಿಯ ದ್ವಾರಕಾ ಹೋಟೆಲ್'ನಲ್ಲಿ ಉಳಿದುಕೊಂಡಿದ್ದರು.

ನವದೆಹಲಿ(ಮಾ.19): ಮೈದಾನದಲ್ಲಿ ಇತರ ದೇಶದ ಆಟಗಾರರಿಗೆ ಭಾರತ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಮಹೇಂದ್ರ ಸಿಂಗ್ ಧೋನಿ ತಮ್ಮ ಬ್ಯಾಟಿಂಗ್ ಹಾಗೂ ಕೀಪಿಂಗ್ ಮೂಲಕ ಚಮತ್ಕಾರ ತೋರಿಸುತ್ತಿದ್ದರು. ಈಗ ಕಳ್ಳರು ಧೋನಿಯನ್ನೇ ಯಾಮಾರಿಸಿದ್ದಾರೆ.

ಖ್ಯಾತ ಆಟಗಾರನ ಮೂರು ಮೊಬೈಲ್'ಗಳನ್ನು ಕಳ್ಳರು ಕದ್ದಿದ್ದು, ಈ ಬಗ್ಗೆ ಧೋನಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಧೋನಿ ಪ್ರಸ್ತುತ ಜಾರ್ಖಂಡ್ ಕ್ರಿಕೆಟ್ ತಂಡದ ನಾಯಕನಾಗಿ ವಿಜಯ್ ಹಜಾರೆ ಟೂರ್ನ'ಮೆಂಟ್'ನಲ್ಲಿ ಆಡುತ್ತಿದ್ದಾರೆ.2 ದಿನಗಳ ಹಿಂದೆ ತಮ್ಮ ತಂಡದ ಆಟಗಾರರ ಜೊತೆ ದೆಹಲಿಯ ದ್ವಾರಕಾ ಹೋಟೆಲ್'ನಲ್ಲಿ ಉಳಿದುಕೊಂಡಿದ್ದರು.

ಆಕಸ್ಮಿಕವಾಗಿ ಹೋಟೆಲ್'ನ ಒಂದು ಭಾಗಕ್ಕೆ ಬೆಂಕಿ ತಗುಲಿತ್ತು. ಆ ನಂತರ ಧೋನಿಯನ್ನು ಒಳಗೊಂಡು ತಂಡದ ಆಟಗಾರರನ್ನು ಹೋಟಲ್'ನಿಂದ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಧೋನಿಯ 3 ಮೊಬೈಲ್'ಗಳು ಕಳುವಾಗಿವೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ