
ಬೆಂಗಳೂರು(ಮಾ.21): ತಾಯಿಯೊಬ್ಬಳು ತಾನು ಸಾವನಪ್ಪುವ ಮುನ್ನ ಮಗಳನ್ನು ರಕ್ಷಿಸಿದ ಘಟನೆ ನಗರದ ಬ್ಯಾಟರಾಯನಪುರದಲ್ಲಿ ನಡೆದಿದೆ.
ಸರಳ ಎಂಬುವವರು ಕಳೆದ ಗುರುವಾರ ಮಗುವಿಗೆ ಹಾಲು ಕಾಯಿಸೋ ಸಲುವಾಗಿ ಗ್ಯಾಸ್ ಸ್ಟವ್ ಹೊತ್ತಿಸಲು ಮುಂದಾದಾಗ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ವೇಳೆ ಮಗು ಅಮ್ಮನ ಕಣ್ಣ ಮುಂದೆಯೇ ಆಟ ಆಡ್ತಾ ಇದ್ದದ್ದನ್ನ ನೋಡಿ ಎಲ್ಲಿ ತನ್ನ ಮಗು ಬೆಂಕಿಗೆ ಸಿಕ್ಕಿ ಬೀಳುತ್ತೋ ಅನ್ನೋ ಭಯದಿಂದ ಅಡುಗೆ ಮನೆಯ ಬಾಗಿಲನ್ನು ಹಾಕಿಕೊಂಡಿದ್ದರು.
ಸಂಪೂರ್ಣ ಗಾಯಗೊಂಡಿದ್ದ ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.