ಮೊರಾರ್ಜಿ ವಸತಿ ಶಾಲೆಗಳಿಗೂ ಇಂದಿರಾ ಹೆಸರು? ಚೆನ್ನಮ್ಮ, ಅಬ್ಬಕ್ಕರ ಹೆಸರು ಸಿಗಲಿಲ್ಲವೇ? ಎಲ್ಲಿ ಹೋಯ್ತು ಸಿಎಂ ನಾಡಪ್ರೇಮ?

Published : Aug 16, 2017, 01:25 PM ISTUpdated : Apr 11, 2018, 12:56 PM IST
ಮೊರಾರ್ಜಿ ವಸತಿ ಶಾಲೆಗಳಿಗೂ ಇಂದಿರಾ ಹೆಸರು? ಚೆನ್ನಮ್ಮ, ಅಬ್ಬಕ್ಕರ ಹೆಸರು ಸಿಗಲಿಲ್ಲವೇ? ಎಲ್ಲಿ ಹೋಯ್ತು ಸಿಎಂ ನಾಡಪ್ರೇಮ?

ಸಾರಾಂಶ

ಎಚ್.ಡಿ.ದೇವೇಗೌಡ ಅವರ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿಯವರ ಹೆಸರಿಡಲಾಗಿತ್ತು. ಭಾರತದ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರ ನೆನಪಿಗಾಗಿ ದೇವೇಗೌಡ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಮಕ್ಕಳ ವಸತಿ ಶಾಲೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡಲಾಗಿತ್ತು. ಇದೀಗ, ಕಾಂಗ್ರೆಸ್ ಸರಕಾರವು ಇಡೀ ವಸತಿ ಶಾಲೆಗಳನ್ನು ಇಂದಿರಾಮಯ ಮಾಡುತ್ತಿದೆ.

ಬೆಂಗಳೂರು(ಆ. 16): ನಾಡ ಪ್ರೇಮದ ಬಗ್ಗೆ ಭಾಷಣ ಮಾಡುವ ರಾಜ್ಯ ಸರಕಾರ ಈಗ ರಾಜ್ಯವನ್ನು ಇಂದಿರಾಮಯ ಮಾಡಲು ಹೊರಟಂತಿದೆ. ಇಂದಿರಾ ಕ್ಯಾಂಟೀನ್ ಆಯ್ತು ಈಗ ವಸತಿ ಶಾಲೆಗಳಿಗೆ ಇಂದಿರಾ ಗಾಂಧಿಯವರ ಹೆಸರಿಡಲು ಸರಕಾರ ನಿರ್ಧರಿಸಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಹೆಸರನ್ನೂ ಬದಲಿಸಿ ಇಂದಿರಾ ಗಾಂಧಿಯವರ ಹೆಸರನ್ನು ಇಡಲಾಗುತ್ತಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ವಸತಿ ಶಾಲೆಗಳಿಗೆ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಎಂದು ಹೆಸರಿಡಲಾಗಿದೆ. 2016-17ನೇ ಸಾಲಿನಲ್ಲಿ 278 ವಸತಿ ಶಾಲೆಗಳು ಮಂಜೂರಾಗಿವೆ. ಅವೆಲ್ಲವಕ್ಕೂ ಈಗ ಇಂದಿರಾ ಹೆಸರಿಡಲಾಗುತ್ತಿದೆ. ಆದರೆ, ಹಾಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮರುನಾಮಕರಣ ಮಾಡುವ ಪ್ರಕ್ರಿಯೆಯೂ ಆರಂಭವಾಗಿದೆ. ಈಗಾಗಲೇ ಕೆಲ ವಸತಿ ಶಾಲೆಗಳ ಹೆಸರನ್ನು ಬದಲಿಸಿದ್ದಾರೆನ್ನಲಾಗಿದೆ.

ಎಚ್.ಡಿ.ದೇವೇಗೌಡ ಅವರ ಅವಧಿಯಲ್ಲಿ ರಾಜ್ಯದ ಹಿಂದುಳಿದ ವರ್ಗ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಮೊರಾರ್ಜಿ ದೇಸಾಯಿಯವರ ಹೆಸರಿಡಲಾಗಿತ್ತು. ಭಾರತದ ಪ್ರಪ್ರಥಮ ಕಾಂಗ್ರೆಸ್ಸೇತರ ಸರಕಾರದಲ್ಲಿ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರ ನೆನಪಿಗಾಗಿ ದೇವೇಗೌಡ ಈ ನಿರ್ಧಾರ ಕೈಗೊಂಡಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ಹೆಣ್ಮಕ್ಕಳ ವಸತಿ ಶಾಲೆಗಳಿಗೆ ಕಿತ್ತೂರು ರಾಣಿ ಚೆನ್ನಮ್ಮನವರ ಹೆಸರಿಡಲಾಗಿತ್ತು. ಇದೀಗ, ಕಾಂಗ್ರೆಸ್ ಸರಕಾರವು ಇಡೀ ವಸತಿ ಶಾಲೆಗಳನ್ನು ಇಂದಿರಾಮಯ ಮಾಡುತ್ತಿದೆ.

ಕ್ಯಾಂಟೀನ್ ವಿಚಾರದಲ್ಲೂ ಹೀಗೇ ಆಯಿತು. ತಮಿಳುನಾಡಿನ "ಅಮ್ಮ" ಕ್ಯಾಂಟೀನ್ ಮಾದರಿಯಲ್ಲಿ ಕರ್ನಾಟಕದಲ್ಲೂ ಅಗ್ಗದ ಹಾಗೂ ಉತ್ತಮ ಗುಣಮಟ್ಟದ ಆಹಾರ ನೀಡುವ ಕ್ಯಾಂಟೀನ್ ಆರಂಭಿಸುವಾಗ ಸಿದ್ದರಾಮಯ್ಯ "ನಮ್ಮ ಕ್ಯಾಂಟೀನ್" ಎಂದು ಹೆಸರಿಡಲು ನಿರ್ಧರಿಸಿದ್ದರು. ಆದರೆ, ಇದೀಗ ಅವರು ತಮ್ಮ ನಿರ್ಧಾರ ಬದಲಿಸಿ "ಇಂದಿರಾ ಕ್ಯಾಂಟೀನ್" ಎಂದು ನಾಮಕರಣ ಮಾಡಿದ್ದಾರೆ.

ಯಡಿಯೂರಪ್ಪ ಆಕ್ರೋಶ:
ಕ್ಯಾಂಟೀನ್ ವಿಚಾರದಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಆದರೆ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಹೆಸರನ್ನು ಬದಲಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಬಿಜೆಪಿ ಮುಖಂಡ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!