
ಬೆಂಗಳೂರು (ಆ.01): ಅಲಹಳ್ಳಿ ಕೆರೆಯಲ್ಲಿ ಮತ್ತೊಮ್ಮೆ ಬಯೋಮೆಡಿಕಲ್ ತ್ಯಾಜ್ಯಗಳನ್ನು ಎಸೆದಿರುವುದು ಪತ್ತೆಯಾಗಿದೆ. ಕಳೆದ ತಿಂಗಳಲ್ಲಿ ಕೂಡಾ ತ್ಯಾಜ್ಯಗಳಲ್ಲಿ ಹಾಕಲಾಗಿತ್ತು. ಫ್ರೇಜರ್ ಟೌನ್’ನಲ್ಲಿರುವ ಆಸ್ಪತ್ರೆಯೊಂದು ಈ ತ್ಯಾಜ್ಯಗಳನ್ನು ತಂದು ಹಾಕಿರುವುದು ತನಿಖೆಯಿಂದ ಗೊತ್ತಾಗಿದ್ದು, ಆಸ್ಪತ್ರೆಗೆ 5 ಲಕ್ಷ ರೂ ದಂಡ ವಿಧಿಸಲಾಗಿದೆ.
ಆಲಹಳ್ಳಿ ಕೆರೆಗಳು ಮೇಲಕ್ಕೆ ತೇಲುತ್ತಿದ್ದು, ಕೊಳೆತ ತ್ಯಾಜ್ಯದಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಕಾಡಿತ್ತು. ಇದನ್ನು ಗಮನಿಸಿದ ಕೆರೆ ಚಳುವಳಿಗಾರರು ಬಿಬಿಎಂಪಿಗೆ ಮಾಹಿತಿ ನೀಡಿ ಹೀಗೆ ಮಾಡಿದವರು ಯಾರು ಎಂಬುದನ್ನು ತನಿಖೆ ನಡೆಸಿ ಎಂದು ಒತ್ತಾಯಿಸಿದ್ದರು.
ಕೆರೆಯಲ್ಲಿ ತ್ಯಾಜ್ಯಗಳನ್ನು ಎಸೆದ ಆಸ್ಪತ್ರೆಯಿಂದ ಬಿಬಿಎಂಪಿ 5 ಲಕ್ಷ ರೂ ದಂಡವನ್ನು ಸಂಗ್ರಹಿಸುತ್ತದೆ ಅನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ. ಹೀಗಾಗಿರುವುದು ಇದು ಎರಡನೇ ಬಾರಿ. ಬಿಬಿಎಂಪಿ ಅಥವಾ ಬಿಡಿಎ ಎಲ್ಲಿಯವರೆಗೆ ಕೆರೆಯ ಉಸ್ತುವಾರಿ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಇದೇ ರೀತಿ ತ್ಯಾಜ್ಯಗಳನ್ನು ತಂದು ಹಾಕುತ್ತಾರೆ. ಇದರಿಂದ ಜನರ ಆರೋಗ್ಯ ಹಾಗೂ ಪರಿಸರ ಹಾಳಾಗುತ್ತದೆ ಎಂದು ಕಾರ್ಯಕರ್ತ ಆನಂದ್ ಯೆರ್ವಾದ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.