ಟೂರಿಸಂ, ಟೆರರಿಸಂನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ: ಕಾಶ್ಮೀರಿ ಯುವಕರಿಗೆ ಮೋದಿ ಕಿವಿಮಾತು

Published : Apr 03, 2017, 03:31 AM ISTUpdated : Apr 11, 2018, 12:57 PM IST
ಟೂರಿಸಂ, ಟೆರರಿಸಂನಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ: ಕಾಶ್ಮೀರಿ ಯುವಕರಿಗೆ ಮೋದಿ ಕಿವಿಮಾತು

ಸಾರಾಂಶ

ಕಾಶ್ಮೀರದ ಯುವಕರು ಟೂರಿಸಂ ಮತ್ತು ಟೆರರಿಸಂನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.  ಜಮ್ಮುವಿನ ಚೆನಾನಿ ಮತ್ತು ನಸ್ರಿ ನಡುವಿನ ಸುರಂಗವನ್ನು ಉದ್ಘಾಟನೆ ಮಾಡಿದ ಮೋದಿ, ಆ ಬಳಿಕ ಜಮ್ಮ-ಕಾಶ್ಮೀರದ ಯುವ ಜನತೆಗೆ ಕಿವಿಮಾತು ಹೇಳಿದರು.

ಕಾಶ್ಮೀರ(ಎ.03): ಕಾಶ್ಮೀರದ ಯುವಕರು ಟೂರಿಸಂ ಮತ್ತು ಟೆರರಿಸಂನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.  ಜಮ್ಮುವಿನ ಚೆನಾನಿ ಮತ್ತು ನಸ್ರಿ ನಡುವಿನ ಸುರಂಗವನ್ನು ಉದ್ಘಾಟನೆ ಮಾಡಿದ ಮೋದಿ, ಆ ಬಳಿಕ ಜಮ್ಮ-ಕಾಶ್ಮೀರದ ಯುವ ಜನತೆಗೆ ಕಿವಿಮಾತು ಹೇಳಿದರು.

ಕಾಶ್ಮೀರ ಒಂದು ಸುಂದರ ಪ್ರವಾಸಿತಾಣ, 40 ವರ್ಷಗಳಿಂದ ಈ ಟೆರರಿಸಂ ಕೈ ಬಿಟ್ಟು, ಟೂರಿಸಂ ಬಗ್ಗೆ ಗಮನ ಹರಿಸಿದ್ದರೆ, ಇಡೀ ವಿಶ್ವವೇ ಕಾಶ್ಮೀರದ ಬಾಗಿಲ ಮುಂದೆ ಬಂದು ನಿಲ್ಲುತ್ತಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಒಂದು ಕಲ್ಲಿನಿಂದ ನಾವು ಹೊಡೆಯಬಹುದು, ಆದರೆ ಅದೇ ಕಲ್ಲಿಂದ ದೇಶವನ್ನೂ ಕಟ್ಟಬಹುದು. ಆ ಕಲ್ಲನ್ನ ನಾವು ಯಾವ ರೀತಿ ಬಳಕೆ ಮಾಡಿಕೊಳ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ. ಕಾಶ್ಮೀರವನ್ನು ಒಂದು ಕಲ್ಲಿಗೆ ಹೋಲಿಕೆ ಮಾಡಿ ನೋಡುವುದಾದರೆ, ಕಾಶ್ಮೀರವನ್ನು ಟೆರರಿಸಂ ಮಾರ್ಗಕ್ಕೆ ಹೊಡೆಯುವ ಬದಲು, ಟೂರಿಸಂ ಅನ್ನು ಅಭಿವೃದ್ಧಿ ಪಡಿಸಲು ಬಳಕೆ ಮಾಡಿಕೊಳ್ಳಿ, 40 ವರ್ಷದಿಂದ ಹರಿದ ರಕ್ತದಲ್ಲಿ ಅಮಾಯಕರ ಬಲಿಯಾಗಿದೆಯೇ ವಿನಃ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ
Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್