'ನಾಪತ್ತೆಯಾಗಿದ್ದಾರೆ ಪ್ರಧಾನಿ ಮೋದಿ!, ಪತ್ತೆಯಾಗದಿದ್ದರೆ ದೂರು': ವಾರಣಾಸಿಯ ರಸ್ತೆ ಬದಿಯ ಗೋಡೆಗಳಲ್ಲಿ ಪೋಸ್ಟರ್ಸ್

Published : Aug 21, 2017, 04:22 PM ISTUpdated : Apr 11, 2018, 12:57 PM IST
'ನಾಪತ್ತೆಯಾಗಿದ್ದಾರೆ ಪ್ರಧಾನಿ ಮೋದಿ!, ಪತ್ತೆಯಾಗದಿದ್ದರೆ ದೂರು': ವಾರಣಾಸಿಯ ರಸ್ತೆ ಬದಿಯ ಗೋಡೆಗಳಲ್ಲಿ ಪೋಸ್ಟರ್ಸ್

ಸಾರಾಂಶ

ಉತ್ತರಪ್ರದೇಶದ ವಾರಣಾಸಿಯ ರಸ್ತೆ ಬದಿಯ ಗೋಡೆಗಳ ಮೇಲೆ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಸ್ ಅಂಟಿಸಲಾಗಿದೆ. ಇನ್ನು ಪ್ರಧಾನಿ ಮೋದಿಯ ತವರು ಕ್ಷೇತ್ರ ವಾರಣಾಸಿಯಲ್ಲೇ ಇಂತಹ ಪೋಸ್ಟರ್ಸ್'ಗಳು ಅಂಟಿಸಿರುವುದು ಅಚ್ಚರಿ ಮೂಡಿಸಿವೆ.

ವಾರಣಾಸಿ(ಆ.21): ಉತ್ತರಪ್ರದೇಶದ ವಾರಣಾಸಿಯ ರಸ್ತೆ ಬದಿಯ ಗೋಡೆಗಳ ಮೇಲೆ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್ಸ್ ಅಂಟಿಸಲಾಗಿದೆ. ಇನ್ನು ಪ್ರಧಾನಿ ಮೋದಿಯ ತವರು ಕ್ಷೇತ್ರ ವಾರಣಾಸಿಯಲ್ಲೇ ಇಂತಹ ಪೋಸ್ಟರ್ಸ್'ಗಳು ಅಂಟಿಸಿರುವುದು ಅಚ್ಚರಿ ಮೂಡಿಸಿವೆ.

ಇನ್ನು ಗೋಡೆಗಳ ಮೇಲೆ ಅಂಟಿಸಿರುವ ಈ ಪೋಸ್ಟರ್'ಗಳ ಮೇಲೆ 'ವಾರಣಾಸಿ ಸಂಸದರು ನಾಪತ್ತೆಯಾಗಿದ್ದಾರೆ' ಎಂದು ಬರೆದಿದ್ದು, ಪಕ್ಕದಲ್ಲಿ ಮೋದಿ ಫೋಟೋ ಕೂಡಾ ಇದೆ. ಇದರೊಂದಿಗೆ ಪ್ರಧಾನಿ ಮೋದಿಯನ್ನು ಸಂಭೋದಿಸುತ್ತಾ 'ಅದ್ಯಾವ ದೇಶಕ್ಕೆ ನೀವು ಹೊರಟುಹೋಗಿದ್ದೀರಿ ಎಂಬುವುದು ನಮಗೆ ತಿಳಿಯದು. ಒಂದು ವೇಳೆ ಸಂಸದರು(ಮೋದಿ) ಸಿಗದಿದ್ದಲ್ಲಿ ನಾಪತ್ತೆಯಾಗಿದ್ದಾರೆಂದು ದೂರು ನೀಡುವುದಾಗಿ ಬರೆಯಲಾಗಿದೆ. ಈವರೆಗೂ ಈ ಪೋಸ್ಟರ್'ಗಳನ್ನು ಅಂಡಿಸಿದ್ದು ಯಾರು ಎಂಬ ಮಾಹಿತಿ ಲಭ್ಯವಾಗಿಲ್ಲ.

ಪೋಸ್ಟರ್'ನ ಕೆಳ ಭಾಗದಲ್ಲಿ ನಿವೇದಕರ ಹೆಸರು ನಮೂದಿಸುವಲ್ಲಿ 'ಅಸಹಾಯಕ ಮತ್ತು ಹತಾಶ ಕಾಶಿವಾಸಿ' ಎಂದು ನಮೂದಿಸಲಾಗಿದೆ. ಇಂತಹ ಪೋಸ್ಟರ್'ಗಳು ಅಂಟಿಸಲಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆಯೇ ಜನರಲ್ಲಿ ಗೊಂದಲ ಮೂಡಿದೆ, ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಧ್ಯರಾತ್ರಿಯೇ ಇವುಗಳನ್ನು ಹರಿದು ಎಸೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ