
ಮೂಡಲಗಿ (ಮೇ. 30): ಮೋದಿ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತಿದ್ದ ಮೋದಿ ಅಭಿಮಾನಿಯೊಬ್ಬ ಗಾಜಿನ ಮೇಲೆ ನಡೆಯುವ ಮೂಲಕ ಹರಕೆ ತೀರಿಸಿದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಬುಧವಾರ ನಡೆದಿದೆ.
ಮೂಡಲಗಿ ನಿವಾಸಿ ಸುರೇಶ ಬೆಳವಿ (38) ಹರಕೆ ತೀರಿಸಿದ ಮೋದಿ ಅಭಿಮಾನಿ. ಈ ಅಭಿಮಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವಂತೆ ಹರಕೆ ಹೊತ್ತುಕೊಂಡಿದ್ದರು. ಹೀಗಾಗಿ ಪ್ರಮಾಣವಚನ
ಸ್ವೀಕರಿಸುವ ಮುನ್ನಾ ದಿನದ ಮುಂಚೆಯೇ ಸ್ಥಳೀಯ ಎಸ್ಎಸ್ಆರ್ ಕಾಲೇಜು ಆವರಣದಲ್ಲಿ ಒಡೆದ ಗಾಜಿನ ಮೇಲೆ ನಡೆದು ಹರಕೆ ತೀರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.