ಮಾಜಿ ಶಾಸಕರ ಸಹಚರರಿಂದ ಕಪಾಳಮೋಕ್ಷ

By Suvarna Web DeskFirst Published Mar 11, 2018, 5:30 PM IST
Highlights

ಮಾಜಿ ಶಾಸಕ ಅಭಯ ಪಾಟೀಲ್ ಮತ್ತವರ ಸಹಚರರು ಪಾಂಡುರಂಗ ದ್ರೋತ್ರೆ ಮೇಲೆ ಹಲ್ಲೆ ನಡೆಸಿದ್ದಾರೆ. 

ಬೆಳಗಾವಿ (ಮಾ. 11):  ಮಾಜಿ ಶಾಸಕ ಅಭಯ ಪಾಟೀಲ್ ಮತ್ತವರ ಸಹಚರರು ಪಾಂಡುರಂಗ ದ್ರೋತ್ರೆ ಮೇಲೆ ಹಲ್ಲೆ ನಡೆಸಿದ್ದಾರೆ. 
ಮಾಜಿ ಶಾಸಕ ಅಭಯ ಪಾಟೀಲ್ ಹಾಗೂ ಹಲ್ಲೆಗೊಳಗಾದ ಪಾಂಡುರಂಗ ದ್ರೋತ್ರೆ ಇಬ್ಬರು ಬೆಳಗಾವಿ ದಕ್ಷಿಣ ಕ್ಷೇತ್ರ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು‌.
ನಗರದ ರಾಮನಾಥ ಭವನದಲ್ಲಿ ನಡೆದ ಬಿಜೆಪಿ ನವಶಕ್ತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.  ಕಾರ್ಯಕ್ರಮಕ್ಕೆ ಪಾಂಡುರಂಗ ದೋತ್ರೆ ಮತ್ತು ಸುನೀಲ್ ಚೌಗಲೆ ಆಗಮಿಸಿದಕ್ಕೆ ಆಕ್ಷೇಪಿಸಿ ಹಲ್ಲೆ ನಡೆಸಲಾಗಿದೆ. 
ಪಾಂಡುರಂಗ ದ್ರೋತ್ರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.  ಮಾಜಿ ಶಾಸಕ ಅಭಯ ಪಾಟೀಲ್ ವಿರುದ್ಧ ಕೇಸ್ ದಾಖಲಿಸಲಾಗಿದೆ.  

click me!