
ನವದೆಹಲಿ(ಮಾ.27): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಅಂತರೀಕ್ಷ ವಿಜ್ಞಾನಿಗಳು. ಲೋ ಅರ್ಥ್ ಆರ್ಬಿಟ್ ಕ್ಷೇತ್ರದಲ್ಲಿ ಕೆಳ ಸ್ತರದ ಉಪಗ್ರಹವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ.
ಮಿಶನ್ ಶಕ್ತಿ ಹೆಸರಲ್ಲಿ ಅಂತರೀಕ್ಷದಲ್ಲಿ 3 ಸಾವಿರ ಕಿ.ಮೀ. ದೂರದಲ್ಲಿ ಯಶಸ್ವಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದ್ದು, ಕೇವಲ 3 ನಿಮಿಷದಲ್ಲಿ ಕೆಳ ಸ್ತರದ ಉಪಗ್ರಹ ಹೊಡೆದುರುಳಿಸುವಲ್ಲಿ ಸಫಲತೆ ಸಾಧಿಸಲಾಗಿದೆ.
ಬಾಹ್ಯಾಕಾಶ ಉಪಗ್ರಹ ಹೊಡೆದುರುಳಿಸುವ ತಂತ್ರಜ್ಞಾನ ಹೊಂದಿದ ವಿಶ್ವದ ನಾಲ್ಕನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇದಕ್ಕೂ ಮೊದಲು ಅಮೆರಿಕ, ರಷ್ಯಾ ಮತ್ತು ಚೀನಾ ಬಳಿ ಮಾತ್ರ ಈ ತಂತ್ರಜ್ಞಾನವಿತ್ತು.
ಬಾಹ್ಯಾಕಾಶ ಗುಪ್ತಚರ ಉಪಗ್ರಹ ಹೊಡೆದುರಳಿಸುವ ತಂತ್ರಜ್ಞಾನವನ್ನು ಭಾರತ ಪಡೆದಿದ್ದು, ಅಂತರೀಕ್ಷ ಸಮರಕ್ಕೂ ಭಾರತ ಸಿದ್ಧವಾಗಿದೆ ಎಂಧು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಭವಿಷ್ಯದಲ್ಲಿ ಉಪಗ್ರಹ ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಲಿದೆ ಎಂದಿರುವ ಪ್ರಧಾನಿ, ಅಂತರೀಕ್ಷದೊಂದಿಗೆ ಜೀವನ ನಡೆಸುವುದು ಭವಿಷ್ಯದಲ್ಲಿ ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.
ASAT ಕ್ಷಿಪಣಿ ತಂತ್ರಜ್ಞಾನ ಇದೀಗ ಭಾರತದ ಬಳಿ ಇದ್ದು, ದೇಶದ ವಿರುದ್ಧ ಬಾಹ್ಯಾಕಶದಲ್ಲಿ ಗುಪ್ರಚರವೂ ಸೇರಿದಂತೆ ಅಂತರಿಕ್ಷ ಸಮರಕ್ಕೆ ಮುಂದಾಗುವ ದುಸ್ಸಾಹಸವನ್ನು ಯಾರೂ ಮಾಡಲಾರರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.