
ಅಹಮದಾಬಾದ್(ಸೆ.11): ವಿಸರ್ಜನೆಗೆಂದು ತಂದ ಸಾವಿರಾರು ಗಣಪತಿ ಮೂರ್ತಿಗಳನ್ನು ರಸ್ತೆಯಲ್ಲೇ ಬಿಟ್ಟು ಹೋಗಲಾಗಿದೆ ಎಂಬರ್ಥದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಡಿಯೋ ಸತ್ಯಾಸತ್ಯತೆ ಕುರಿತು ಭಾರೀ ಚರ್ಚೆಯಾಗುತ್ತಿದೆ.
ಗುಜರಾತ್ನ ಅಹಮದಾಬದ್ನಲ್ಲಿ ಸಾಬರಮತಿ ನದಿಯಲ್ಲಿ ವಿಸರ್ಜನೆಗೆ ಅವಕಾಶ ನೀಡಲಿಲ್ಲ ಎಂದು ಸಾವಿರಾರು ಗಣಪತಿಗಳನ್ನು ರಸ್ತೆಯಲ್ಲೇ ಬಿಡಲಾಗಿದೆ ಎಂಬ ವಿಡಿಯೋ ಹರಿದಾಡುತ್ತಿತ್ತು. ಈ ವಿಡಿಯೋ ವಿಕ್ಷೀಸಿದ್ದ ಕೆಲವರು ಪರಿಸರ ಮಾಲಿನ್ಯದ ಆತಂಕ ವ್ಯಕ್ತಪಡಿಸಿದ್ದರು.
ಆದರೆ ಅಂಕುರ್ ಸಿಂಗ್ ಎಂಬುವವರು ಈ ವಿಡಿಯೋ ಸತ್ಯಾಸತ್ಯತೆ ತಿಳಿಸಿದ್ದು, ಅಸಲಿಗೆ ಇವು ಗಣೇಶನ್ ವಿಗ್ರಹಗಳಲ್ಲ ಬದಲಿಗೆ ದಶ್ಮಾ ವಿಗ್ರಹಗಳಾಗಿದ್ದು, ನದಿಯಲ್ಲಿ ವಿಸರ್ಜನೆ ಮಾಡಿ ನದಿಯನ್ನು ಮಲಿನಗೊಳಿಸುವ ಬದಲು ಜನರೇ ಖುದ್ದಾಗಿ ದಶ್ಮಾ ಮೂರ್ತಿಗಳನ್ನು ಸಾಬರಮತಿ ನದಿ ದಂಡೆ ಬಳಿ ಇಟ್ಟು ಹೋಗಿದ್ದಾರೆ.
ನಂತರ ನಗರಾಡಳಿತ ಈ ಮೂರ್ತಿಗಳನ್ನು ಸಂಗ್ರಹಿಸಿ ಮೂರ್ತಿ ವಿಸರ್ಜನೆಗೆ ನಿಗದಿಪಡಿಸಿರುವ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜನೆ ಮಾಡಿದ್ದಾರೆ ಎಂದು ಅಂಕುರ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.