ಸಾವಿಗೇ ಸವಾಲೊಡ್ಡಿ ಬದುಕಿ ಬಂದ ಧೀರ ಯೋಧ: 9 ಗುಂಡಿಗೆ ಎದೆಯೊಡ್ಡಿದ ಯೋಧನ ಆರೋಗ್ಯ ಸುಧಾರಣೆ

Published : Apr 05, 2017, 08:15 AM ISTUpdated : Apr 11, 2018, 12:40 PM IST
ಸಾವಿಗೇ ಸವಾಲೊಡ್ಡಿ ಬದುಕಿ ಬಂದ ಧೀರ ಯೋಧ: 9 ಗುಂಡಿಗೆ ಎದೆಯೊಡ್ಡಿದ ಯೋಧನ ಆರೋಗ್ಯ ಸುಧಾರಣೆ

ಸಾರಾಂಶ

ಉಗ್ರರೊಂದಿಗಿನ ಕಾದಾಟದಲ್ಲಿ 9 ಗುಂಡೇಟು ತಿಂದಿದ್ದ ಯೋಧ ಚೇತನ್, ಸಾವನ್ನೂ ಗೆದ್ದಿದ್ದಾರೆ. ವೈದ್ಯರೇ ಅಚ್ಚರಿ ಪಡುವ ರೀತಿಯಲ್ಲಿ ಸಾವನ್ನೂ ಗೆದ್ದಿದ್ದಾರೆ.

ನವದೆಹಲಿ(ಎ.05): ಉಗ್ರರೊಂದಿಗಿನ ಕಾದಾಟದಲ್ಲಿ 9 ಗುಂಡೇಟು ತಿಂದಿದ್ದ ಯೋಧ ಚೇತನ್, ಸಾವನ್ನೂ ಗೆದ್ದಿದ್ದಾರೆ. ವೈದ್ಯರೇ ಅಚ್ಚರಿ ಪಡುವ ರೀತಿಯಲ್ಲಿ ಸಾವನ್ನೂ ಗೆದ್ದಿದ್ದಾರೆ.

ಐಸಿಯುನಲ್ಲಿ ಕೋಮಾದಲ್ಲಿದ್ದ ಚೇತನ್ ಕುಮಾರ್ ಚೀತಾ, ಕೋಮಾದಿಂದ ಹೊರಬಂದಿದ್ದಾರೆ. ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ  ಬಂಡಿಪೋರಾ ಜಿಲ್ಲೆಯ ಹಜಿನ್ ಏರಿಯಾದಲ್ಲಿ ಉಗ್ರರ ಅಡಗುದಾಣದ ಮೇಲೆ ದಾಳಿ ನಡೆದಿತ್ತು. ಈ ವೇಳೆ ನಡೆದ ಎನ್'ಕೌಂಟರ್'ನಲ್ಲಿ ಚೇತನ್ ಕುಮಾರ್  ತೀವ್ರ ಗಾಯಗೊಂಡಿ ಚೇತನ್ ಕುಮಾರ್'ರನ್ನು ದೆಹಲಿಯ ಏಮ್ಸ್ ಆಸ್ಪತ್ರಗೆ ದಾಖಲಿಸಲಾಗಿತ್ತು.

ಕೋಮಾದಲ್ಲಿದ್ದ ಈ ಯೋಧ ಸತತ  ಒಂದು ತಿಂಗಳು ಐಸಿಯುನಲ್ಲಿದ್ದರು. ಇಂದು ವೈದ್ಯರು ಯೋಧನ ಆರೋಗ್ಯದ ಮಾಹಿತಿ ಬಿಡುಗಡೆ ಮಾಡಿದ್ದು, ಇವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ ಎಂದು ತಿಳಿಸಿದ್ದಾರೆ.

ಇವರನ್ನು ಕೇವಲ 24 ಗಂಟೆಯೊಳಗೆ ಆಪರೇಷನ್ ಮಾಡಿ, ತಲೆಗೆ ಬಿದ್ದಿದ್ದ ಬುಲೆಟ್​'ನ ಚೂರುಗಳನ್ನು ತೆಗೆಯಲಾಗಿತ್ತು. ಆದರೆ, ಮೆದುಳಿನಲ್ಲಿ ಇನ್​'ಫೆಕ್ಷನ್ ಆಗುವ ಸಾಧ್ಯತೆ ಇದ್ದ ಕಾರಣ, ವಿಶೇಷ ನಿಗಾವಹಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!