
ಮೈಸೂರು(ನ.12): ರಾಜಕಾರಣಿಗಳ ಬ್ಲಾಕ್ ಮನಿ ರಕ್ಷಣೆಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ಎಂಬ ಅನುಮಾನ ಕಂಡುಬಂದಿದೆ. ಮೈಸೂರಿನಲ್ಲಿ ಇದಕ್ಕಾಗಿ ಟೊಂಕಕಟ್ಟಿ ನಿಂತಿದೆ ಚೆಸ್ಕಾಂ ಸಂಸ್ಥೆ. ಚೆಸ್ಕಾಂ ಎಂಡಿ ಕಿರಣ್, ಸಚಿವ ಮಹದೇವಪ್ಪ ಹಾಗೂ ಪುತ್ರ ಸುನಿಲ್ ಬೋಸ್ಗೆ ಪರಮಾಪ್ತ ಆಗಿದ್ದು, ಚೆಸ್ಕಾಂನ ವ್ಯಾಪ್ತಿಯ ಎಲ್ಲಾ ಬಿಲ್ ಕೌಂಟರ್ಗಳಿಗೆ ಕಟ್ಟಾಜ್ಞೆ ಹೊರಡಿಸಿರುವ ಮೂಲಕ ಅಲ್ಲಿಗೆ ಬರುವ ಎಲ್ಲಾ ಚಿಲ್ಲರೆ ಮೊತ್ತದ ಹಣವನ್ನು ಸಂಗ್ರಹ ಮಾಡಿ, ಯಾರಿಗೂ ಚಿಲ್ಲರೆ ವಾಪಸ್ ಕೊಡಬೇಡಿ ಎಂದು ಹೇಳಿದ್ದಾರೆ. ಸಂಗ್ರಹವಾಗುವ 100, 50 ರೂಪಾಯಿ ನೋಟುಗಳನ್ನು ಉಳಿಸಿ ಅದೇ ಮೊತ್ತಕ್ಕೆ ಹೊಸ 500, 2000 ಸಾವಿರ ನೋಟುಗಳನ್ನು ಪಡೆಯುವ ಹುನ್ನಾರ ನಡೆದಿದೆ ಎಂದು ಆರೋಪಿಸಲಾಗಿದೆ. ಬಿಲ್ ಕೌಂಟರ್ಗಳಲ್ಲಿ ಖುದ್ದು ಎಇ, ಎಇಇಗಳೇ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ನಯಾ ಪೈಸೆ ಚಿಲ್ಲರೆ ವಾಪಸ್ ಕೊಡದಂತೆ ತಾಕೀತು ಮಾಡಲಾಗಿದೆ ಎನ್ನಲಾಗ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.