ಇಲಿಗಳು ಎಟಿಎಂನ ಹಣ ತಿಂದಿದ್ದು ಬೆಂಗಳೂರಲ್ಲಲ್ಲ ಅಸ್ಸಾಂನ ತಿನ್ಸುಕಿಯಾದಲ್ಲಿ

Published : Jun 20, 2018, 09:13 AM IST
ಇಲಿಗಳು ಎಟಿಎಂನ ಹಣ  ತಿಂದಿದ್ದು ಬೆಂಗಳೂರಲ್ಲಲ್ಲ  ಅಸ್ಸಾಂನ ತಿನ್ಸುಕಿಯಾದಲ್ಲಿ

ಸಾರಾಂಶ

‘ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿ ಇಲಿರಾಯನ ಕಸರತ್ತು’ ಎಂಬ ಬರಹದೊಂದಿಗೆ ಎಟಿಎಂನಲ್ಲಿ ಲಕ್ಷಾಂತರ ರು. ಮೌಲ್ಯದ ನೋಟುಗಳನ್ನು ಇಲಿಗಳು ತಿಂದುಹಾಕಿವೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಆದರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ, ಬದಲಾಗಿ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ತಿನ್ಸುಕಿಯಾದ ಲೈಪುಲಿ ಪ್ರದೇಶದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂ ಮೇ 20ರಿಂದ ತಾಂತ್ರಿಕ ಕಾರಣಗಳಿಂದ ಬಂದ್‌ ಆಗಿತ್ತು. ಆಗ ಮೂಷಿಕಗಳು ಅದ್ಹೇಗೋ ಎಟಿಎಂ ಯಂತ್ರದ ಒಳಗೆ ಪ್ರವೇಶಿಸಿವೆ. 

ಗುವಾಹಟಿ  (ಜೂ. 20):  ಬೆಂಗಳೂರಿನ ಮತ್ತಿಕೆರೆಯ ಎಟಿಎಂನಲ್ಲಿ ಇಲಿರಾಯನ ಕಸರತ್ತು’ ಎಂಬ ಬರಹದೊಂದಿಗೆ ಎಟಿಎಂನಲ್ಲಿ ಲಕ್ಷಾಂತರ ರು. ಮೌಲ್ಯದ ನೋಟುಗಳನ್ನು ಇಲಿಗಳು ತಿಂದುಹಾಕಿವೆ ಎಂಬ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು. ಆದರೆ ಈ ಘಟನೆ ನಡೆದಿದ್ದು ಬೆಂಗಳೂರಿನಲ್ಲಲ್ಲ. 

ಬದಲಾಗಿ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ತಿನ್ಸುಕಿಯಾದ ಲೈಪುಲಿ ಪ್ರದೇಶದ ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಟಿಎಂ ಮೇ 20ರಿಂದ ತಾಂತ್ರಿಕ ಕಾರಣಗಳಿಂದ ಬಂದ್‌ ಆಗಿತ್ತು. ಆಗ ಮೂಷಿಕಗಳು ಅದ್ಹೇಗೋ ಎಟಿಎಂ ಯಂತ್ರದ ಒಳಗೆ ಪ್ರವೇಶಿಸಿವೆ. ಯಂತ್ರದೊಳಗಿದ್ದ 29 ಲಕ್ಷ ರು.ನಲ್ಲಿ 12.38 ಲಕ್ಷ ರು. ಮೌಲ್ಯದ ನೋಟುಗಳನ್ನು ತಿಂದುಹಾಕಿದ್ದವು. ಉಳಿದ 17 ಲಕ್ಷ ರು. ಸುರಕ್ಷಿತವಾಗಿದೆ. ಸೋಮವಾರ ಈ ಕೃತ್ಯ ಬೆಳಕಿಗೆ ಬಂದಿದೆ.ಈ ಸಂಬಂಧ ನೋಟು ತುಂಬುವ ಗ್ಲೋಬಲ್‌ ಸಲ್ಯೂಷನ್‌ ಎಂಬ ಹೊರಗುತ್ತಿಗೆ ಕಂಪನಿ ತಿನ್ಸುಕಿಯಾ ಠಾಣೆಯಲ್ಲಿ ದೂರು ದಾಖಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಭೂತಿಗಳಲ್ಲೇ ಐಕ್ಯರಾದ ಭಾರತದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ! ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ರಜೆ ಮುಗಿಸಿ ವಾಪಾಸ್‌ ಬಂದ ಬಾಲಕಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್‌, ಸರ್ಕಾರಿ ಗರ್ಲ್ಸ್‌ ಹಾಸ್ಟೆಲ್‌ನ ಹೊಸ ನಿಯಮಕ್ಕೆ ಆಕ್ರೋಶ