#MeToo ವಿಚಾರಣೆ ವೇಳೆ ವಿಸ್ಮಯ ನಿರ್ಮಾಪಕನಿಂದ ಹೊಸ ಬಾಂಬ್!

Published : Oct 31, 2018, 03:24 PM ISTUpdated : Oct 31, 2018, 07:24 PM IST
#MeToo ವಿಚಾರಣೆ ವೇಳೆ ವಿಸ್ಮಯ ನಿರ್ಮಾಪಕನಿಂದ ಹೊಸ ಬಾಂಬ್!

ಸಾರಾಂಶ

ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳದ ತನಿಖೆ ನಡೆಸುತ್ತಿರುವ ಕಬ್ಬನ್ ಪಾರ್ಕ್ ಪೊಲೀಸರು | ವಿಸ್ಮಯ ಚಿತ್ರತಂಡದ ಮಂದಿಯ ವಿಚಾರಣೆ | ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ ನಿರ್ಮಾಪಕ ಉದಯ್ ಕುಮಾರ್ 

ಬೆಂಗಳೂರು: ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರು,  ಬುಧವಾರ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್ ಹೇಳಿಕೆಯನ್ನು ದಾಖಲಿಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಹಾಜರಾದ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್, ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ. 

ಉಮೇಶ್ ಪೊಲೀಸರ ಮುಂದೇ ಹೇಳಿದ್ದೇನು..? 

ಶೃತಿ ಶೂಟಿಂಗ್ ಸೆಟ್ ಗೆ ಬಂದದ್ದು ಕೇವಲ 9 ದಿನ ಮಾತ್ರ...ಶೃತಿಗೆ 3 ಲಕ್ಷ ರೂಪಾಯಿ ಪೇಮೆಂಟ್ ಕೊಟ್ಟಿದ್ದೆವು. ಶೃತಿ ಆರೋಪಿದ ಹಾಗೆ ಯಾವುದೇ ಘಟನೆ ಶೂಟಿಂಗ್ ಸೆಟ್‌ನಲ್ಲಿ ನಡೆದಿಲ್ಲ. ಚಿತ್ರದ ಶೂಟಿಂಗ್ ಸೆಟ್ನಲ್ಲಿ ಸುಮಾರು 40 ಜನ ಇರ್ತೆವೆ, ಅಲ್ಲಿ ಆ ರೀತಿ ನಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಏನೋ ಹೇಳಲು ಹೋದ ಶೃತಿ ಅದಕ್ಕೇ ಸ್ಟಿಕ್ ಆನ್ ಆಗಿದ್ದಾರೆ.  ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಆರೋಪ ಮಾಡಿದಂತೆ ಕಾಣುತ್ತಿದೆ, ಎಂದು ಹೇಳಿದ್ದಾರೆ.

"

ವಿಸ್ಮಯ ಚಿತ್ರದ ವಿಲನ್ ರೋಲ್ ಗೆ ಚೇತನ್ ಆಯ್ಕೆ ಮಾಡಲಾಗಿತ್ತು, ನಂತರ ಜೆ.ಕೆ ಸಾಕಷ್ಟು ಪಾಪುಲರ್ ಆಗಿದ್ದು ಚೇತನ್ ಕೈಬಿಡಲಾಗಿತ್ತು. ಇನ್ನು ಪ್ರೇಮಬರಹ ಚಿತ್ರಕ್ಕೂ ಚೇತನ್ ಹೆಸರು ಕೈಬಿಟ್ಟಿರುವುಸರಿಂದ ಚೇತನ್ ಶೃತಿಗೆ ಸಪೋರ್ಟ್ ಮಾಡಿದ್ದಾರೆ, ಎಂದು ಉಮೇಶ್ ಪೊಲೀಸರ ಮುಂದೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಮಂಗಳವಾರ ವಿಸ್ಮಯ ಚಿತ್ರತಂಡದ ಕಿರಣ್ ಮತ್ತು ಮೋನಿಕಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇಂದು ವಿಸ್ಮಯ ಚಿತ್ರ ನಿರ್ದೇಶಕ ಆರುಣ್ ವೈದ್ಯನಾಥನ್, ಶೃತಿ ಸಹಾಯಕ ಬೋರೇಗೌಡ, ಶೃತಿ ಗೆಳತಿ ಯಶಸ್ವಿನಿ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ.

ವಿಸ್ಮಯ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಶೃತಿ ಹರಿಹರನ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು. ಬಳಿಕ, ಶೃತಿ ಆರೋಪವು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ದಿನಕ್ಕೊಂದು ತಿರುವು ಪಡೆದ #MeToo ಆರೋಪವು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.  ನಟ-ನಟಿಯರಿಬ್ಬರ ನಡುವೆ ಚಿತ್ರಮಂಡಳಿಯು ಸಂಧಾನಕ್ಕೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಡೀಪಾರು ಸಂಕಷ್ಟದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ್ ದೇಗುಲದ್ಲಿ ಪ್ರಾರ್ಥನೆ
ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!