ಸಿದ್ದರಾಮಯ್ಯನವರ ಡೈರಿ ಆರೋಪಕ್ಕೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರತಿಕ್ರಿಯೆ

Published : Feb 24, 2017, 11:51 AM ISTUpdated : Apr 11, 2018, 12:45 PM IST
ಸಿದ್ದರಾಮಯ್ಯನವರ ಡೈರಿ ಆರೋಪಕ್ಕೆ ಮಾಜಿ ಸಚಿವ ಎಚ್.ವೈ.ಮೇಟಿ ಪ್ರತಿಕ್ರಿಯೆ

ಸಾರಾಂಶ

ಸಿದ್ದರಾಮಯ್ಯ ಕುಮಾರಸ್ವಾಮಿ ಕೂಡಿ ಆಡಳಿತ ಮಾಡಿದವರು, ಹೀಗಾಗಿ ಅವರಿಗೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಅನ್ನೋದು ಗೊತ್ತಿದೆ,

ಬಾಗಲಕೋಟೆ(ಫೆ.24):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡೈರಿ ಆರೋಪದ ಕುರಿತು ಮಾಜಿ ಸಚಿವ ಎಚ್.ವೈ.ಮೇಟಿ ಪ್ರತಿಕ್ರಿಯೆ ನೀಡಿದ್ದಾರೆ.

'ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ಮೇಲೆ ಡೈರಿ ಆರೋಪ ಮಾಡಿದ್ದು ಸರಿಯಲ್ಲ. ಯಾವುದೋ ಹಳೆ ಡೈರಿ ತಂದು ನಿಜವಾದ ಡೈರಿ ಎಂದು ಬಿಂಬಿಸಲಾಗುತ್ತಿದೆ. ಡೈರಿಯನ್ನ ಯಾರು ಬೇಕಾದರೂ ಬರೆಯಬಹುದು. ಸಿದ್ದರಾಮಯ್ಯ ಇಂತಹ ತಪ್ಪು ಮಾಡೋರಲ್ಲ. ಅವರ ಮೇಲಿನ ಆರೋಪವನ್ನು ಸಹಿಸೋದಿಲ್ಲ. ಐಟಿ ರೇಡ್ ಮಾಡಿದರೆ ಅದ್ಹೇಗೆ ಬಹಿರಂಗ ಮಾಡ್ತಾರೆ. ಯಡಿಯೂರಪ್ಪ ಸ್ವಲ್ಪ ಎಮೋಷನಲ್ ಮನುಷ್ಯ, ಎಮೋಷನಲ್ ಬಿಟ್ಟು ಸಮಾಧಾನದಿಂದ ರಾಜಕೀಯ ಮಾಡಲಿ' ಎಂದರು.

ಕುಮಾರಸ್ವಾಮಿ ಸಿದ್ದರಾಮಯ್ಯ'ಗೆ ರಾಜೀನಾಮೆ ನೀಡಲಿ ಎಂಬ ಹೇಳಿಕೆ ನೀಡಿರೋ ವಿಚಾರದ ಬಗ್ಗೆ ಮಾತನಾಡಿದ ಅವರು,ಡೈರಿಯೇ ಪಕ್ಕಾ ಇಲ್ಲವಾದಾಗ ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ. ವಿರೋಧಪಕ್ಷದಲ್ಲಿ ಇರೋ ಕುಮಾರಸ್ವಾಮಿ ಅವರಿಗೆ ಬೇರೆ ಏನೂ ಆಧಾರವಿಲ್ಲ, ಹೀಗಾಗಿ ಅವರು ಹೇಳೋದು ಅದನ್ನೆ. ಸಿದ್ದರಾಮಯ್ಯ ಕುಮಾರಸ್ವಾಮಿ ಕೂಡಿ ಆಡಳಿತ ಮಾಡಿದವರು, ಹೀಗಾಗಿ ಅವರಿಗೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಅನ್ನೋದು ಗೊತ್ತಿದೆ, ಆದರೆ ರಾಜಕೀಯವಾಗಿ ಸುಮ್ಮನೆ ಹೇಳ್ತಾರೆ' ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

8 ತಿಂಗಳಲ್ಲೇ ದೇವನಹಳ್ಳಿ ಪ್ಲ್ಯಾಂಟ್‌ನಲ್ಲಿ 30 ಸಾವಿರ ಉದ್ಯೋಗಿಗಳ ನೇಮಿಸಿಕೊಂಡ ಫಾಕ್ಸ್‌ಕಾನ್‌!
ರಷ್ಯಾದಲ್ಲಿ ಬೀದಿ ಗುಡಿಸುವ ಭಾರತೀಯ ಟೆಕ್ಕಿ: ಈ ಕೆಲಸಕ್ಕೆ ನೇಮಕಗೊಂಡ ಭಾರತೀಯ ಕಾರ್ಮಿಕರ ವೇತನ ಎಷ್ಟು ಗೊತ್ತಾ?