
ಮಧ್ಯಾಹ್ನ 12.00: ಭಾನುವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಶಾಸಕರ ಭವನದಲ್ಲೇ ರಾಸಲೀಲೆ ನಡೆದಿರುವ ಸುದ್ದಿ ವರದಿ
ಮ. 12.10: ಆರ್ಟಿಐ ಕಾರ್ಯಕರ್ತ ಬಳ್ಳಾರಿ ಮೂಲದ ರಾಜಶೇಖರ್ ಹಾಗೂ ಸಚಿವರ ಗನ್ಮ್ಯಾನ್ ಸುಭಾಷ್ ಸಂಭಾಷಣೆ ಆಡಿಯೋ ಪ್ರಸಾರ
ಮ. 12.30: ರಾಸಲೀಲೆ ನಡೆದಿದೆ ಎಂದು ಬ್ಲಾಕ್ ಮೇಲ್ ಮಾಡ್ತಿದ್ದ ಮಹಿಳೆ ಹೆಸರು ಬಯಲು
ಮ. 12.45: ಅಬಕಾರಿ ಸಚಿವ ಮೇಟಿ ವಿರುದ್ಧ ರಾಸಲೀಲೆ ಆರೋಪ
ಮ. 1.10: ಆರ್ಟಿಐ ಕಾರ್ಯಕರ್ತ ರಾಜಶೇಖರ್ ಬಳ್ಳಾರಿ ಎಸ್ಪಿಗೆ ದೂರು ನೀಡಲು ಸಿದ್ಧತೆ
ಮ. 1.30: ಬಳ್ಳಾರಿಯ ರಹಸ್ಯ ಸ್ಥಳದಲ್ಲಿದ್ದ ಆರ್ಐಟಿ ಕಾರ್ಯಕರ್ತ ರಾಜಶೇಖರ್
ಮ. 1.35: ರಾಸಲೀಲೆ ವಿಡಿಯೋ ಇದೆ ಎಂದಿದ್ದಕ್ಕೆ ರಾಜಶೇಖರ್ ಗೆ ಸಚಿವರ ಬೆಂಬಲಿಗರು ಬೆದರಿಕೆ ಹಾಕಿದ್ದ ವರದಿ ಪ್ರಸಾರ
ಮ. 1.38: ರಾಸಲೀಲೆಯಲ್ಲಿ ಅಬಕಾರಿ ಸಚಿವ ಎಚ್.ವೈ. ಮೇಟಿ? ಹೆಸರು ಬಹಿರಂಗ
ಮ. 2.05: ಸುವರ್ಣನ್ಯೂಸ್ಗೆ ಅಬಕಾರಿ ಸಚಿವ H.Y.ಮೇಟಿ ಪ್ರತಿಕ್ರಿಯೆ
ಮ. 2.10: ನನಗೆ ಯಾವುದೇ ಆರ್ಟಿಐ ಕಾರ್ಯಕರ್ತ ಗೊತ್ತಿಲ್ಲ. ನನ್ನ ಬೆಂಬಲಿಗರು ಯಾರಿಗೂ ಯಾವುದೇ ಬೆದರಿಕೆ ಹಾಕಿಲ್ಲ ಎಂದು ಮೇಟಿ ಹೇಳಿಕೆ
ಮ. 2.16: ಯಾವ ಸಿಡಿ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ನನ್ನ ಹೆಸರಲ್ಲಿ ಧಮ್ಕಿ ಹಾಕಿದವರ ಬಗ್ಗೆ ದೂರು ನೀಡುತ್ತೇನೆಂದು ಮೇಟಿ ಹೇಳಿಕೆ
ಮ. 2.20: ಈ ಬಗ್ಗೆ ರಾಜಶೇಖರ್ ದೂರು ಕೊಟ್ಟರೂ ಎದುರಿಸುವೆ. ಕಾನೂನಿನಲ್ಲಿ ಯಾರಿಗೂ ಯಾರೂ ದೊಡ್ಡವರಲ್ಲ ಎಂದ ಮೇಟಿ
ಮ. 2.30: ಉದ್ಯೋಗ ಕೊಡಿಸಲಿಲ್ಲ ಎಂದು ಬೇಸತ್ತ ಮಹಿಳೆ, ವ್ಯಾನಿಟಿ ಬ್ಯಾಗ್ನಲ್ಲಿ ಹಿಡನ್ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡಿರುವ ಮಾಹಿತಿ ಬಯಲು
ಮ. 2.45: ಅಬಕಾರಿ ಸಚಿವ ಮೇಟಿ ವಿರುದ್ಧ ರಾಸಲೀಲೆ ಆರೋಪಕ್ಕೆ ಟ್ವಿಸ್ಟ್
ಮ. 2.55: 3 ತಿಂಗಳ ಹಿಂದೆಯೇ ಈ ರಾಸಲೀಲೆ ಸಿಡಿ ರೆಡಿಯಾಗಿದ್ದ ಮಾಹಿತಿ ಬಯಲು
ಮ. 3.00: ಈ ಹಿಂದೆಯೇ ರಾಸಲೀಲೆ ವಿವಾರ ಸಿಎಂ ಗಮನಕ್ಕೆ ಬಂದಿದ್ದು ಮೇಟಿಯವರನ್ನು ಕರೆಸಿ ಸಿದ್ದರಾಮಯ್ಯ ಬೈದಿದ್ದರೆಂಬ ವಿಷಯ ಬಯಲು
ಮ. 3.10: ರಾಸಲೀಲೆ ನಡೆದಿರುವುದು ನಿಜ ಎಂದು ಮೇಟಿ ವಿರುದ್ಧ ಮಹಿಳೆ ಆರೋಪ
ಬೆಳಿಗ್ಗೆ 07.00: ಸಚಿವ ಮೇಟಿ ರಾಸಲೀಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ . ಪ್ರಕರಣದ ಸೂತ್ರಧಾರ ಸ್ವತಃ ಸಚಿವರ ಪರ್ಸನಲ್ ಅಸಿಸ್ಟೆಂಟ್ ಎಂಬ ಸುದ್ದಿ ಬಹಿರಂಗ
ಬೆ. 8.00: ಸುಭಾಷ್ ಅನ್ನೋ ಗನ್ಮ್ಯಾನ್ ವಿರುದ್ಧ ಸಂತ್ರಸ್ತ ಮಹಿಳೆ ಆರೋಪ
ಬೆ. 9.00: ಮಹಿಳೆ ಆರೋಪ ನಿರಾಕರಿಸಿದ ಸುಭಾಷ್ ತಂದೆ
ಮಧ್ಯಾಹ್ನ 3.00 : ಸುದ್ದಿವಾಹಿನಿಗಳಲ್ಲಿ ಹೇಳಿಕೆ ನೀಡಿದ ಮಹಿಳೆ ನನ್ನ ಪತ್ನಿ ವಿಜಯಲಕ್ಷ್ಮಿಯೇ ಎಂದು ಸ್ಪಷ್ಟ ಪಡಿಸಿದ ಸಂತ್ರಸ್ತೆಯ ಪತಿ ಬಸವರಾಜು
ಸಂಜೆ 05.00: ಪ್ರಕರಣದಲ್ಲಿ ಸಂತ್ರಸ್ತೆ ಯೂಟರ್ನ್. ಮೇಟಿ ವಿರುದ್ಧ ಆರೋಪ ಮಾಡಿದ್ದ ಮಹಿಳೆ, ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ ಅಂತ ಹೇಳಿಕೆ
ಸಂ. 5.15 : ಸಚಿವ ಮೇಟಿ ನನಗೆ ತಂದೆ ಸಮಾನರು. ಇದು ಷಡ್ಯಂತ್ರ ಎಂದ ಮಹಿಳೆ
ಸಂ. 5.30 : ಬಾಗಲಕೋಟೆಯಲ್ಲಿ ರಿಯಾಕ್ಟ್ ಮಾಡಿದ, ಸಚಿವ ಎಚ್.ವೈ.ಮೇಟಿ. ವಿಜಯಲಕ್ಷ್ಮಿ ನನ್ನ ಸಂಬಂಧಿ ಎಂದ ಮೇಟಿ
ಸಂ. 5.45 : ಸುಭಾಷ್ ಅನ್ನೋ ಗನ್ಮ್ಯಾನ್ ನನಗೆ ಗೊತ್ತಿಲ್ಲ, ನಮ್ಮ ಮೇಲಿನ ಆರೋಪ ಸುಳ್ಳು ಎಂದ ಮೇಟಿ
ಬೆಳಿಗ್ಗೆ 10.30 : ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಜಯಲಕ್ಷ್ಮಿ
ಬೆ. 10.35 : ಮೇಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್
ಬೆ. 10.45: ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿರುವ ಮಹಿಳೆ ನಾನೇ. ಆದ್ರೆ ! ಬೆದರಿಕೆ ಹಾಕಿ ನನ್ನ ಹೇಳಿಕೆ ಪಡೆದಿದ್ದರು ಎಂದ ವಿಜಯಲಕ್ಷ್ಮಿ
ಬೆ. 11.00: ಡಿಆರ್ ಪೇದೆ ಸುಭಾಷ್ ಮುಗಳಕೋಡ ಕೊಲೆ ಬೆದರಿಕೆ ಹಾಕುವ ಮೂಲಕ ಮೊಬೈಲ್ ಸಂದರ್ಶನ ಮಾಡಿಕೊಂಡಿದ್ದಾರೆಂದು ವಿಜಯಲಕ್ಷ್ಮೀ ಹೇಳಿಕೆ
ಬೆ. 11.15: ಮೇಟಿಯವರ ವಿಡಿಯೋಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದ ವಿಜಯಲಕ್ಷ್ಮಿ
ಮಧ್ಯಾಹ್ನ 12.30: ಸಂತ್ರಸ್ತ ಮಹಿಳೆ ವಿಜಯಲಕ್ಷ್ಮೀ ತನಗೆ ಜೀವ ಬೆದರಿಕೆ ಇದೆ ಎಂದು ಎಸ್ಪಿ ಕಚೇರಿಗೆ ಮೌಖಿಕ ದೂರು ಸಲ್ಲಿಕೆ
ಸಂಜೆ 6.30: ಅನಾರೋಗ್ಯದ ಹಿನ್ನೆಲೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆ ಸೇರಿದ ವಿಜಯಲಕ್ಷ್ಮಿ
ಸಂ. 6.40: ಪೊಲೀಸರ ಭದ್ರತೆಯಲ್ಲಿ ವಿಜಯಲಕ್ಷ್ಮಿಗೆ ಚಿಕಿತ್ಸೆ
ಸಂ. 7.30: ವಿಜಯಲಕ್ಷ್ಮಿ ಹೊಟ್ಟೆನೋವು, ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ವೈದ್ಯರ ಹೇಳಿಕೆ
ರಾತ್ರಿ 11.35: ರಾತ್ರೋ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವಿಜಯಲಕ್ಷ್ಮಿ
ರಾ. 11.35: ಮಧ್ಯರಾತ್ರಿಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಹೊಸ ಟ್ವಿಸ್ಟ್
ರಾ. 12.00: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪೊಲೀಸ್ ಭದ್ರತೆ ನಿರಾಕರಿಸಿ ಹೊರಟ ವಿಜಯಲಕ್ಷ್ಮಿ
ರಾ. 12.30: ಯಾವುದೇ ಸುಳಿವಿಲ್ಲದ ಸ್ಥಳದಲ್ಲಿರುವ ವಿಜಯಲಕ್ಷ್ಮಿ
ಬೆಳಗ್ಗೆ 9.30 : ದೆಹಲಿ ತಲುಪಿದ ಮೇಟಿ ಸಿಡಿ ಪ್ರಕರಣ
ಬೆ. 9.30 : ರಾಹುಲ್ ಗಾಂಧಿ ಭೇಟಿಗಾಗಿ ದೆಹಲಿಯಲ್ಲಿ ಪ್ರತ್ಯಕ್ಷವಾದ ರಾಜಶೇಖರ್
ಬೆಳಗ್ಗೆ 9.45 : ನನ್ನ ಬಳಿ ಯಾವುದೇ ಸಿಡಿ ಇಲ್ಲ ಎಂದು ಸುವರ್ಣ ನ್ಯೂಸ್ ಗೆ ರಾಜಶೇಖರ್ ಹೇಳಿಕೆ
ಬೆಳಗ್ಗೆ 9.50 : ಮೇಟಿ ರಾಸಲೀಲೆ ದೃಶ್ಯಗಳನ್ನ ನಾನು ನೋಡಿದ್ದೇನೆ - ರಾಜಶೇಖರ್
ಬೆಳಗ್ಗೆ 9.50 : ಸಿಡಿ ಬಿಡುಗಡೆ ಮಾಡ್ತೀನಿ ಅಂದಿದ್ದ ರಾಜಶೇಖರ್ ಉಲ್ಟಾ ಹೇಳಿಕೆ
ಬೆಳಗ್ಗೆ 10.00 : ವಿಜಯಲಕ್ಷ್ಮಿ ಸರಧಿ ಮುಗೀತು, ಇವಾಗ ರಾಜಶೇಖರ್ ಉಲ್ಟಾ ಅಧ್ಯಾಯ ಪ್ರಾರಂಭ
ಬೆಳಗ್ಗೆ 11.00 : ನನ್ನ ಬಳಿ ಸಿಡಿ ಇರುವುದು ಸತ್ಯ, ಅದನ್ನ ಎಲ್ಲಾ ಮೀಡಿಯಾಗಳಿಗೂ ನೀಡ್ತೀನಿ ಎಂದ ರಾಜಶೇಖರ್
ಬೆಳಗ್ಗೆ 11.30 : ದೆಹಲಿಯಲ್ಲಿ ಮೇಟಿ ರಾಸಲೀಲೆ ಸಿಡಿ ಬಹಿರಂಗ
ಬೆಳಗ್ಗೆ 11.30 : ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ಬಹಿರಂಗಗೊಳಿಸಿದ ಮೇಟಿ ರಹಸ್ಯ ಸಿಡಿ
ಬೆಳಗ್ಗೆ 11.58: ರಾಜೀನಾಮೆ ನೀಡಿದ ಅಬಕಾರಿ ಸಚಿವ ಹೆಚ್ ವೈ ಮೇಟಿ
ಬೆಳಗ್ಗೆ 11.58: ರಾಸಲೀಲೆ ಸಿಡಿ ಬಹಿರಂಗ ಆಗುತ್ತಿದ್ದಂತೆ ಮೇಟಿ ರಾಜೀನಾಮೆ
ಬೆಳಗ್ಗೆ 11.59: ಮಾಧ್ಯಮಗಳ ಕಣ್ತಪ್ಪಿಸಿ ಸಿಎಂ ಬಳಿ ರಾಜೀನಾಮೆ ಸಲ್ಲಿಕೆ
ಮಧ್ಯಾಹ್ನ 12.00 : 36 ನಿಮಿಷ 10 ಸೆಕೆಂಡ್ ಇರುವ ರಾಸಲೀಲೆ ವೀಡಿಯೋ
ಮ. 12.13 : ಸರ್ಕಾರಕ್ಕೆ ಮೇಟಿ ರಾಜೀನಾಮೆ ಸಲ್ಲಿಕೆ, ಅಂಗೀಕಾರಕ್ಕಾಗಿ ವೇಟಿಂಗ್
ಮ. 12.20: ಅನುಗ್ರಹ ನಿಲಯದಲ್ಲಿ ಅಬಕಾರಿ ಸಚಿವ ಎಂಬ ನಾಮಫಲಕ ತೆಗೆದುಹಾಕಿದ ಮೇಟಿ
ಮ. 12.30 : ಮೇಟಿ ಸಿಎಂ ಸಿದ್ದರಾಮಯ್ಯ ತರಾಟೆ
ಮ. 12.30: ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ? ನೀನೊಬ್ಬ ವಿಶ್ವಾಸ ದ್ರೋಹಿ - ಸಿಎಂ
ಮ. 12.30: ನಾವು ಬಿಜೆಪಿಯವ್ರನ್ನ ಬೈಯುತ್ತಿದ್ದೆವು. ಈಗ ನೀವೇ ಹೀಗೆ ಮಾಡಿದ್ದೀರಾ - ಸಿಎಂ
ಮ. 12.30: ಮೇಟಿ ಮೇಲೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ
ಮ. 12.35: ಮೇಟಿ ರಾಜೀನಾಮೆ ಅಂಗೀಕರಿಸಿದ ಸಿಎಂ ಸಿದ್ದರಾಮಯ್ಯ
ಮ. 12.40: ರಾಸಲೀಲೆ ಸಿಡಿ ಬಿಡುಗಡೆ ನಂತರ ಮೇಟಿ ಪ್ರತಿಕ್ರಿಯೆ
ಮ. 12.40: ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆಂದು ಮಾಧ್ಯಮಗಳಿಗೆ ಮೇಟಿ ಹೇಳಿಕೆ
ಮ. 12.40: ಸರ್ಕಾರಕ್ಕೆ ಮುಜುಗರವಾಗಬಾರದೆಂದು ರಾಜೀನಾಮೇ ನೀಡಿದ್ದೇನೆ
ಮ. 12.40: ನನ್ನದೇನು ತಪ್ಪಿಲ್ಲ, ಈ ಬಗ್ಗೆ ತನಿಖೆ ನಡೆಯಲಿ ಎಂದು ಮೇಟಿ ಪ್ರತಿಕ್ರಿಯೆ
ಮ. 12.57: ಸಿಎಂ ಸಿದ್ದರಾಮಯ್ಯರಿಂದ ತನಿಖೆಗೆ ಆದೇಶ, ಟ್ವಿಟರ್ ನಲ್ಲಿ ಸಿಎಂ ಸ್ಪಷ್ಟನೆ
ಮ.1.00: ದೆಹಲಿಯಲ್ಲಿ ಮೇಟಿ ವಿರುದ್ಧ ಸಿಡಿದೆದ್ದ ಆರ್ ಟಿ ಐ ಕಾರ್ಯಕರ್ತ ರಾಜಶೇಖರ್
ಮ. 1.10: ರಾಜ್ಯಪಾಲರಿಗೆ ಮೇಟಿ ರಾಜೀನಾಮೆ ರವಾನಿಸಿದ ಸಿಎಂ ಸಿದ್ದರಾಮಯ್ಯ
ಮ. 1.15: ಆರ್ ಟಿ ಐ ಕಾರ್ಯಕರ್ತ ರಾಜಶೇಖರ್ ನಿಂದ ಮತ್ತೊಂದ್ ಬಾಂಬ್
ಮ. 1.16: ಇನ್ನೂ 3 ಸಚಿವರ, 2 ಶಾಸಕರ ಸಿಕ್ರೆಟ್ ದಾಖಲೆ ಇದೆ ಎಂದ ರಾಜಶೇಖರ್
ಮ. 1.27: ಮೇಟಿ ನಿವಾಸದ ಬಳಿ ಮಾಧ್ಯಮದವರ ಮೇಲೆ ಮೇಟಿ ಬೆಂಬಲಿಗರ ದರ್ಪ
ಮ. 1.36: ಸರ್ಕಾರದ ಒಂದೊಂದೇ ಹಗರಣಗಳನ್ನು ಬಯಲು ಮಾಡುವೆ - ರಾಜಶೇಖರ್
ಮ. 1.36: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮೆಟ್ಟಿಲೇರಿದ ಮೇಟಿ
ಮ. 1.36: ರಾಸಲೀಲೆ ಸಿಡಿ ಪ್ರಸಾರ ಕ್ಕೆ ತಡೆ ಕೋರಿ ಕೋರ್ಟ್ ಗೆ ಅರ್ಜಿ
ಮ. 1.40: ರಾಸಲೀಲೆ ವೀಡಿಯೋ ಮಾಡಿದ್ದ ಗನ್ ಮ್ಯಾನ್ ಸುಭಾಷ್ ಮನೆಗೆ ಪೊಲೀಸ್ ಭದ್ರತೆ
ಮ. 1.40: ಬಾಗಲಕೋಟೆಯ ಮೇಟಿ ನಿವಾಸಕ್ಕೆ ಪೊಲೀಸ್ ಭದ್ರತೆ
ಮ. 2.00: ಮೇಟಿ ವಿರುದ್ಧ ಬಾಗಲಕೋಟೆಯಲ್ಲಿ ಸಾರ್ವಜನಿಕರ ಪ್ರತಿಭಟನೆ
ಮ. 2.20: ಮೇಟಿ ಪ್ರಕರಣದ ಸಂಬಂಧ ಸಿಎಂ ಪ್ರೆಸ್ ಮೀಟ್
ಮ. 2.23: ಮೇಟಿ ಸ್ವಯಂ ರಾಜೀನಾಮೆ ನೀಡಿದ್ದಾರೆ - ಸಿಎಂ
ಮ. 2.25: ನನಗೇನು ಗೊತ್ತಿಲ್ಲ, ಮೇಟಿ ಬಗ್ಗೆನು ನಾನು ಸಿಡಿ ನೋಡಿಲ್ಲ - ಸಿಎಂ
ಮ. 2.27: ಸಿಡಿ ಬಿಡುಗಡೆ ಮಾಡಿದ ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ನಾನು ಮೊದಲೇ ಹೇಳಿದ್ದೆ
ಮ. 2.27: ಏನೆಲ್ಲ ಷಡ್ಯಂತ್ರ ನಡೆದಿದೆ ಇದರ ತನಿಖೆಗೆ ಸಿಐಡಿ ಗೆ ಕೊಡುತ್ತೇನೆ - ಸಿಎಂ
ಮ. 2.29: ಸತ್ಯಾ ಸತ್ಯತೆಯನ್ನು ತಿಳಿಸಲು ತನಿಖೆ ನಡೆಸಲಾಗುವುದು - ಸಿಎಂ
ಮ. 2.31: ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ - ಸಿಎಂ
ಮ. 02.36: ಮೇಟಿ ವೀಡಿಯೋ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಮ.02.49: ವಿಧಾನ ಸೌಧದಲ್ಲಿನ 339 ನೇ ನಂಬರಿನ ಮೇಟಿ ಕೊಠಡಿ ಬಂದ್
ಮ.02.49: ಮೇಟಿ ನಾಮಫಲಕ ತೆಗೆದು ಕೊಠಡಿ ಬಂದ್
ಮ.02.57: ಬಾಗಲಕೋಟೆಯಲ್ಲಿ ಹೆಚ್ಚಿದ ಪ್ರತಿಭಟನೆ ತೀವ್ರತೆ
ಮ. 03.00: ಮೇಟಿ ರಾಸಲೀಲೆ ವೀಡಿಯೋ ಹೊರಬೀಳುತ್ತಿದ್ದಂತೆ ವಿದ್ಯುತ್ ಸ್ಥಗಿತ
ಮ. 03.00: ಬಾಗಲಕೋಟೆ ಸೇರಿದಂತೆ ಹಲವು ಕಡೆ ಪವರ್ ಕಟ್
ಮ. 03.25: ಮೇಟಿ ವಿರುದ್ಧ ಸಿಡಿದೆದ್ದ ಬಾಗಲಕೋಟೆ ಜನ
ಮ. 03.45: ಮೇಟಿ ಪ್ರತಿಕೃತಿ ಧಹಿಸಿ ಬಾಗಲಕೋಟೆಯಲ್ಲಿ ಪ್ರತಿಭಟನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.