
ನವದೆಹಲಿ(ಜ.27): ತಮ್ಮನ್ನು ತಾವು ಮತ್ತೊಮ್ಮೆ ನಿರ್ದೋಷಿ ಎಂದು ಘೋಷಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ, ಮಾಧ್ಯಮಗಳು ತಾವೇ ವಿಚಾರಣೆ ನಡೆಸಿ ನನ್ನನ್ನು ದೋಷಿ ಎಂದು ತೀರ್ಮಾನಿಸಿವೆ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ತಮ್ಮ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿದ ಬಳಿಕ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳ ಬಗ್ಗೆ ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಮಲ್ಯ, ನಾನೇ ನೇರವಾಗಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದಿಲ್ಲ. ಕಿಂಗ್'ಫಿಶರ್ ಏರ್'ಲೈನ್ಸ್ ಸಂಸ್ಥೆ ಸಾಲ ಪಡೆದಿತ್ತು. ಕಿಂಗ್'ಫಿಶರ್ ಭಾರತೀಯರ ಪಾಲಿಗೆ ಒಂದು ದೊಡ್ಡ ಉಡುಗೊರೆಯಾಗಿತ್ತೇ ಹೊರತು, ಅದು ನನ್ನ ಆಟಿಕೆಯಾಗಿರಲಿಲ್ಲ.
ಮೇಲಾಗಿ ಯಾವುದೇ ಬ್ಯಾಂಕ್'ಗಳು ನಾನು ಪಾವತಿ ಮಾಡಬೇಕಿರುವ ಹಣದ ಮೊತ್ತವನ್ನು ಹೇಳಿಲ್ಲ. ಅಲ್ಲದೇ ನಾನೇನು ದೇಶ ಬಿಟ್ಟು ಓಡಿಹೋಗಿಲ್ಲ. ನಾನು 1998ರಿಂದಲೇ ಅನಿವಾಸಿ ಭಾರತೀಯ. ಹೀಗಾಗಿ ಲಂಡನ್'ಗೆ ಹೋಗಿ ನೆಲೆಸಿದ್ದು ಏಕಾಏಕಿ ಕೈಗೊಂಡ ನಿರ್ಧಾರವಲ್ಲ ಎಂದು ತಾವು ಪರಾರಿಯಾದ ಘಟನೆಯನ್ನು ಬೇರೆ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.