
ಬೆಂಗಳೂರು : ರಾಜ್ಯ ನಾಯಕತ್ವದ ಮೂಲಕ ಹೈಕಮಾಂಡ್ ನೀಡಿರುವ ಈ ಭರವಸೆ ಹಾಗೂ ಎಚ್ಚರಿಕೆ ನಂತರವೂ ಅತೃಪ್ತರು ಸಭೆಗಳನ್ನು ನಡೆಸಿದರು.
ಈ ನಡುವೆ, ಎರಡನೇ ಹಂತದ ಸಂಪುಟದಲ್ಲಿ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಚನಬಸಪ್ಪ ಶಿವಳ್ಳಿ, ಧರ್ಮಸೇನಾ ಮೊದಲಾದವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಆದರೆ, ಮೊದಲ ಹಂತದಲ್ಲಿ ಸಚಿವ ಸ್ಥಾನ ದೊರೆಯದಿರುವುದರಿಂದ ತೀವ್ರ ಅತೃಪ್ತಿ ಹೊಂದಿರುವ ಎಂ.ಬಿ. ಪಾಟೀಲ ಅವರು ಸಚಿವ ಸ್ಥಾನಕ್ಕೆ ಒಪ್ಪುವ ಮನಸ್ಥಿತಿಯಲ್ಲಿ ಇಲ್ಲ ಎಂದು ಅವರ ಆಪ್ತರು ಹೇಳುತ್ತಾರೆ.
ಈ ಆಪ್ತರ ಪ್ರಕಾರ ಉಪ ಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರಕಿದರೆ ಮಾತ್ರ ಎಂ.ಬಿ. ಪಾಟೀಲ ಅವರು ಒಪ್ಪಬಹುದು. ಇಲ್ಲದಿದ್ದರೆ, ಪ್ರತ್ಯೇಕ ಗುಂಪಿನ ನಾಯಕರಾಗಿ ಉಳಿಯುವ ಸಾಧ್ಯತೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.