
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ಮತ್ತೆ ಆರಂಭವಾಗಲು ತೆರೆಮರೆ ಕಸರತ್ತು ಶುರು ಮಾಡಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರಿಗೆ ಮಂತ್ರಿಮಾಲ್'ನ ಆಡಳಿತ ಮಂಡಳಿ ಸಂಪೂರ್ಣ ಕಟ್ಟಡ ಪರಿಶೀಲನಾ ವರದಿಯನ್ನ ಸಲ್ಲಿಕೆ ಮಾಡಿದ್ದು, ಆ ವರದಿ ಸುವರ್ಣನ್ಯೂಸ್ಗೆ ಲಭ್ಯವಾಗಿದೆ.
ಮಂತ್ರಿ ಮಾಲ್ ಫೆ.12ರಂದು ಸಲ್ಲಿಕೆ ಮಾಡಿರೋ ವರದಿಯಲ್ಲಿ ಕಟ್ಟಡದ ಸಾರ್ಮಥ್ಯವನ್ನು ಪರಿಶೀಲನೆ ನಡೆಸಿರುವ ಬಗ್ಗೆ ಉಲ್ಲೇಖವಾಗಿದೆ. ಇನ್ಫೋಟೆಕ್ ಎಂಬ ಕಂಪನಿ ಜ.16 ರಿಂದ ಫೆ.6ರ ವರೆಗೆ ಪರಿಶೀಲನೆ ನಡೆಸಿದೆ. ಬಿಬಿಎಂಪಿ ಹಾಗೂ ತಜ್ಞರ ತಂಡ ನಡೆಸಿರೋ ಪರಿಶೀಲನೆ ಆಧರಿಸಿ ನಡೆದಿರುವ ವರದಿಯಲ್ಲಿ ಕುಸಿತವಾದ ಗೋಡೆಯ ಸಮೀಪವಿದ್ದ ಕೊಳಚೆ ನೀರು ಹರಿಯುವ ಪೈಪ್ ಜಾಗವನ್ನ ಬದಲಾಯಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.
21 ಭಾವಚಿತ್ರಗಳ ಸಹಿತ 71 ವರದಿ ನೀಡಲಾಗಿದ್ದು, ಬಿಬಿಎಂಪಿ ವರದಿಯನ್ನು ಒಪ್ಪಿ ಮತ್ತೊಮ್ಮೆ ಮಂತ್ರಿಮಾಲ್ ಗೋಡೆ ಕುಸಿತ ಸ್ಥಳವನ್ನು ಪರಿಶೀಲಿಸಿ ಮಾಲ್ ಆರಂಭಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.