
ನವದೆಹಲಿ (ಜೂ. 13): ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಚ್ಛ ಭಾರತ ಯೋಜನೆ’ಯ ಮೂರನೇ ಹಂತದ ಯೋಜನೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಂದಿರ ಸೇರಿದಂತೆ ಒಟ್ಟು 10 ಸಾಂಪ್ರದಾಯಿಕ ಕ್ಷೇತ್ರಗಳು ಆಯ್ಕೆಯಾಗಿವೆ.
ಈ ಮೂಲಕ ಈಗಾಗಲೇ ಸ್ವಚ್ಛ ಭಾರತದ 1 ಮತ್ತು 2ನೇ ಹಂತದಲ್ಲಿ ನೈರ್ಮಲ್ಯೀಕರಣಕ್ಕೆ ಒಳಗಾಗುತ್ತಿರುವ 20 ಸಾಂಪ್ರದಾಯಿಕ ಪ್ರದೇಶಗಳ ಪಟ್ಟಿಗೆ ಈ ಸಾಂಪ್ರದಾಯಿಕ ಕ್ಷೇತ್ರಗಳು ಸಹ ಸೇರ್ಪಡೆಯಾಗಿವೆ. ಸ್ವಚ್ಛ ಭಾರತದ ಮೂರನೇ ಹಂತದ ಯೋಜನೆಗೆ ಕೇರಳದ ಶಬರಿ ಮಲೆ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ಹಜದ್ರ್ವಾರಿ ಪ್ಯಾಲೇಸ್, ಹರ್ಯಾಣದ ಕುರುಕ್ಷೇತ್ರದ ಬ್ರಹ್ಮ ಸರೋವರ ಮಂದಿರ, ಉತ್ತರ ಪ್ರದೇಶದ ವಿದೂರ್ ಕುಟಿ, ಉತ್ತರಾಖಂಡ್ನ ಮನ ಗ್ರಾಮ, ಜಮ್ಮು-ಕಾಶ್ಮೀರದ ಪಾಂಗಾಂಗ್ ಕೆರೆ, ಉತ್ತರ ಪ್ರದೇಶದ ನಾಗವಸುಕಿ ಮಂದಿರ, ಮಣಿಪುರದ ಇಮಾ ಕೀಥಲ್ ಮಾರ್ಕೆಟ್ ಮತ್ತು ಉತ್ತರಾಖಂಡ್ನ ಕನ್ವಾಶ್ರಮಗಳು ಆಯ್ಕೆಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.