
ನವದೆಹಲಿ (ಜ.30): ಉದ್ಯಮಿ ವಿಜಯ್ ಮಲ್ಯರವರು ಸಾಲ ಪಡೆಯಲು ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಸಹಾಯ ಮಾಡಿದ್ದರು ಎಂದು ಭಾರತೀಯ ಜನತಾ ಪಕ್ಷ ಇಂದು ಆರೋಪಿಸಿದೆ.
2011 ಮತ್ತು 2013 ರಲ್ಲಿ ವಿಜಯ್ ಮಲ್ಯ ಅಂದಿನ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂರವರಿಗೆ ಸಾಲ ಪಡೆಯಲು ನೆರವಾಗುವಂತೆ ಕೋರಿ ಪತ್ರ ಬರೆದಿದ್ದರು. ನಂತರ ಸರ್ಕಾರ ಸಾಲ ಪಡೆಯಲು ನೆರವು ನೀಡಿತು. ಮನಮೋಹನ್ ಸಿಂಗ್ ಒತ್ತಾಯದ ಮೇರೆಗೆ ಮಲ್ಯರಿಗೆ ಸಾಲ ನೀಡಲಾಗಿತ್ತು. ಜೊತೆಗೆ ಆದಾಯ ತೆರಿಗೆ ಇಲಾಖೆ ಇವರ ಖಾತೆಗಳ ಬಗ್ಗೆ ನಿಗಾಯಿಟ್ಟಿರಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಬೃಹತ್ ಮೊತ್ತವನ್ನು ವಿಜಯ್ ಮಲ್ಯ ಎಲ್ಲಿಂದ ಸಂಗ್ರಹಿಸಿದರು? ಮುಳುಗುತ್ತಿರುವ ಹಡಗು (ಕಾಂಗ್ರೆಸ್) ಮುಳುಗುತ್ತಿರುವ ಕಿಂಗ್ ಫಿಶರ್ ಗೆ ಸಹಾಯ ಮಾಡಿತ್ತೇ? ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.