ವಿಚಾರವಾದಿ ನರೇಂದ್ರ ನಾಯಕ್ ಫ್ಲಾಟ್'ಗೆ ಅಪರಿಚಿತ ಎಂಟ್ರಿ

Published : Jun 14, 2018, 07:33 PM ISTUpdated : Jun 14, 2018, 07:35 PM IST
ವಿಚಾರವಾದಿ ನರೇಂದ್ರ ನಾಯಕ್ ಫ್ಲಾಟ್'ಗೆ ಅಪರಿಚಿತ ಎಂಟ್ರಿ

ಸಾರಾಂಶ

ಮಂಗಳೂರಿನ ಲೇಡಿಹಿಲ್ ಬಳಿಯ ಫ್ಲಾಟ್'ನಲ್ಲಿ ಕಾಣಿಸಿಕೊಂಡ ಅಪರಿಚಿತ ಕಳೆದ ವರ್ಷ ಹತ್ಯೆ ಕೂಡ ಯತ್ನ ಪ್ರಯತ್ನ ನಡೆದಿತ್ತು

ಮಂಗಳೂರು[ಜೂ.14]: ವಿಚಾರವಾದಿ ನರೇಂದ್ರ ನಾಯಕ್ ಇರುವ ಫ್ಲಾಟ್'ಗೆ ಅಪರಿಚಿತನೊಬ್ಬ ಭೇಟಿ ನೀಡಿರುವುದು ಘಟನೆ ಮಂಗಳೂರಿನ ಲೇಡಿಹಿಲ್ ಬಳಿ ನಡೆದಿದೆ.
ಫ್ಲಾಟ್'ನ ಭದ್ರತಾ ಸಿಬ್ಬಂದಿ ಆಗುಂತುಕನನ್ನು ಪ್ರಶ್ನಿಸಿದಾಗ ನರೇಂದ್ರ ನಾಯಕ್ ಬಗ್ಗೆ ವಿಚಾರಿಸಿದ್ದಾನೆ.

ಅಪರಿಚಿತ ಓಡಾಡಿರುವುದು ಹತ್ಯೆಗೆ ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷವೂ ಕೂಡ ನರೇಂದ್ರ ನಾಯಕ್ ಹತ್ಯೆ ಪ್ರಯತ್ನ ನಡೆದಿತ್ತು. ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಇಬ್ಬರು ಬೈಕನ್ನು ಹಿಂಬಾಲಿಸಿ ಟೈರ್ ಪಂಕ್ಚರ್ ಆಗಿದೆ ಎಂದು ಕಾರು ನಿಲ್ಲಿಸಲು ಪ್ರಯತ್ನಿಸಿದ್ದರು. ಅಪಾಯದ ಮುನ್ಸೂಚನೆ ಅರಿತ ನಾಯಕರು ಕಾರನ್ನು ನಿಲ್ಲಿಸದೆ ಪ್ರಯಾಣಿಸಿದ್ದರು.  ನಂತರ ಪೊಲೀಸರಿಗೆ ದೂರು ನೀಡಿದ್ದರು. 

2017ರ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಶೂಟರ್ ಪರಶುರಾಮ್ ವಾಗ್ಮೋರೆ ಎಂಬಾತನನ್ನು 2 ದಿನಗಳ ಹಿಂದಷ್ಟೆ ಬಂಧಿಸಲಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌